Wednesday 30 November 2016

ಕೋಗಿಲೆಯೇ ಕ್ಷೇಮವೇ

ಚಿತ್ರ: ಮಣ್ಣಿನ ದೋಣಿ (1992)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯನ: ಎಸ್. ಜಾನಕಿ

ಕೋಗಿಲೆಯೇ ಕ್ಷೇಮವೇ
ಕಸ್ತೂರಿಯೇ ಸೌಖ್ಯವೇ..

ಕೋಗಿಲೆಯೇ ಕ್ಷೇಮವೇ
ಕಸ್ತೂರಿಯೇ ಸೌಖ್ಯವೇ
ನೈದಿಲೆಯೇ ನಿದಿರೆಯೇ
ಮಲ್ಲಿಗೆಯೇ ಮಂಪರೇ
ಏಳಿರಿ ಏಳಿರಿ ಮೇಲೆ
ನೇಸರ ಬಂದನು ಮೇಲೆ ನೋಡಿ
ಮಂಜಿನ ನೀರಲ್ಲಿ ಮುದ್ದು ಮೋರೆಯ ತೊಳೆದು ಬಂದು ಹಾಡಿ

ಕೋಗಿಲೆಯೇ ಕ್ಷೇಮವೇ
ಕಸ್ತೂರಿಯೇ ಸೌಖ್ಯವೇ
ನೈದಿಲೆಯೇ ನಿದಿರೆಯೇ
ಮಲ್ಲಿಗೆಯೇ ಮಂಪರೇ

ಕಾನನದಲಿ ಬೀಸುವ ಗಾಳಿಗೆ
ಎಂದು ಆಲಸ್ಯ ಬಂದಿದೆ ಹೇಳಿ
ಬೆಟ್ಟಗಳಲ್ಲಿ ಓಡುವ ನದಿಯು
ಎಂದು ದಣಿದು ನಿಂತಿದೆ ಕೇಳಿ
ತಾರೆಗಳಂತೆ ಮೂಡುವ ಮೇಘಗಳಿಗೆ
ಬೇಸರ ಬಂದಿತ್ತೆ ಕೇಳಿ
ವೀರರ ಕೈಲಿ ಬಗ್ಗದ ಮಳೆಯ ಬಿಲ್ಲು
ಬರೆನು ಎಂಬುದೆ ಹೇಳಿ
ಭುವನ ತಿರುಗಿದೆ.. ಓ.. ಗಗನ ಚಲಿಸಿದೆ
ಕವನ ಕಡೆದಿದೆ.. ಓ.. ಬದುಕು ಬರೆಸಿದೆ
ಏಳಿರಿ ಏಳಿರಿ ಮೇಲೆ
ನೇಸರ ಬಂದನು ಮೇಲೆ ನೋಡಿ
ಮಂಜಿನ ನೀರಲ್ಲಿ ಮುದ್ದು ಮೋರೆಯ ತೊಳೆದು ಬಂದು ಹಾಡಿ

ಕೋಗಿಲೆಯೇ ಕ್ಷೇಮವೇ
ಕಸ್ತೂರಿಯೇ ಸೌಖ್ಯವೇ
ನೈದಿಲೆಯೇ ನಿದಿರೆಯೇ
ಮಲ್ಲಿಗೆಯೇ ಮಂಪರೇ

ಜಾಣರ ಗುಂಪು ಕಂಪಿನ ತೋಟಕ್ಕೆ ಹಾರಿ
ಸೊಂಪಿನ ಜೇನನ್ನು ತಂದವು
ಪುಂಡರ ಗುಂಪು ಹುಳಿಯ ತೋಪಿಗೆ ನುಗ್ಗಿ
ಹೊಟ್ಟೆಯ ಬಿರಿಯ ತಿಂದವು
ತಪ್ಪಲಿನಲ್ಲಿ ರಂಗಿನ ಅಟ್ಟೆಯ ಹೊಯ್ದ
ಪತಂಗ ಪಡೆಯ ಪಯಣ
ಕೆಚ್ಚಲಿನಲ್ಲಿ ಗೋವಿನ ಕೂಸಿನ
ದೊಡ್ಡ ಕಣ್ಣಿನ ಮೆಚ್ಚಿನ ಮೌನ
ಕಮಲ ಕುಳಿತೆಯಾ.. ಓ.. ಅಳಿಲೆ ಅವಿತೆಯಾ
ನವಿಲೆ ನಿಂತೆಯಾ.. ಓ.. ಕನಸೆ ಮರೆತೆಯಾ
ಏಳಿರಿ ಏಳಿರಿ ಮೇಲೆ
ನೇಸರ ಬಂದನು ಮೇಲೆ ನೋಡಿ
ಮಂಜಿನ ನೀರಲ್ಲಿ ಮುದ್ದು ಮೋರೆಯ ತೊಳೆದು ಬಂದು ಹಾಡಿ

ಕೋಗಿಲೆಯೇ ಕ್ಷೇಮವೇ
ಕಸ್ತೂರಿಯೇ ಸೌಖ್ಯವೇ
ನೈದಿಲೆಯೇ ನಿದಿರೆಯೇ
ಮಲ್ಲಿಗೆಯೇ ಮಂಪರೇ

No comments:

Post a Comment