Monday 19 December 2016

ರವಿ-ಹಂಸ ಕಾಂಬಿನೇಷನ್ ನಲ್ಲಿ ಮೂಡಿಬಂದ ಚಿತ್ರಗಳು

ರವಿ-ಹಂಸ ಇವರಿಬ್ಬರ ಕಾಂಬಿನೇಷನ್ ನಲ್ಲಿ ಬಂದ ಚಿತ್ರಗಳು

1987 ಪ್ರೇಮಲೋಕ
1987 ಸಂಗ್ರಾಮ
1988 ರಣಧೀರ
1988 ಅಂಜದಗಂಡು
1989 ಯುಗಪುರುಷ
1989 ಕಿಂದರಿಜೋಗಿ
1989 ಯುದ್ದಕಾಂಡ
1989 ಪೋಲಿಹುಡುಗ
1990ಬಣ್ಣದ ಗೆಜ್ಜೆ
1990 ಅಭಿಮನ್ಯು
1991 ಶಾಂತಿಕ್ರಾಂತಿ
1991 ರಾಮಾಚಾರಿ
1992 ಹಳ್ಳಿಮೇಷ್ಟ್ರು
1992 ಗೋಪಿಕೃಷ್ಣ
1992 ಗುರುಬ್ರಹ್ಮ
1992 ಚಿಕ್ಕೆಜಮಾನ್ರು
1992 ಶ್ರೀರಾಮಚಂದ್ರ
1993 ಮನೇದೇವ್ರು
1993 ಗಡಿಬಿಡಿಗಂಡ
1993 ಅಣ್ಣಯ್ಯ
1994 ಚಿನ್ನ
1994 ಜಾಣ
1994 ರಸಿಕ
1995 ಪುಟ್ನಂಜ
1996 ಸಿಪಾಯಿ
1997 ಕಲಾವಿದ
1997 ಮೊಮ್ಮಗ
1997 ಚೆಲುವ
1998 ಯಾರೇ ನೀನು ಚೆಲುವೆ
1998 ಪ್ರೀತ್ಸೋದ್ ತಪ್ಪಾ?
2002 ಪ್ರೀತಿಮಾಡೋಹುಡುಗರಿಗೆಲ್ಲಾ
2003 ಒಂದಾಗೋಣಬಾ
2012 ನರಸಿಂಹ

ಬೆನ್ನ ಹಿಂದೆ

ಚಿತ್ರ: ಬಾವ ಬಾಮೈದ (2001)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯನ: ಕೆ. ಎಸ್. ಚಿತ್ರ

ಬೆನ್ನ ಹಿಂದೆ ನೀನು ಬಂದೆ.. ತಮ್ಮಯ್ಯ.. ತಮ್ಮಯ್ಯ
ಕಣ್ಣ ಮುಂದೆ ಬಾಳಿ ಬೆಳಗೋ.. ಕಂದಯ್ಯ ನನ್ನ ತಮ್ಮಯ್ಯ
ಅಕ್ಕ ಅನ್ನೋ ಹಾಲೆರೆವೆ, ಅಮ್ಮ ಅನ್ನೋ ಉಸಿರೆರೆವೆ
ಚಂದಮಾಮ.. ಓ ಚಂದಮಾಮ

ಬೆನ್ನ ಹಿಂದೆ ನೀನು ಬಂದೆ.. ತಮ್ಮಯ್ಯ.. ತಮ್ಮಯ್ಯ
ಕಣ್ಣ ಮುಂದೆ ಬಾಳಿ ಬೆಳಗೋ.. ಕಂದಯ್ಯ ನನ್ನ ತಮ್ಮಯ್ಯ

ಭಾವನ ಹೆಗಲಿಗೆ ಕೂಸಾಗಿ
ಈ ಊರೆಲ್ಲಾ ನಿನ್ನ ಮಾತಾಗಿ
ಆ ಮಾತೆಲ್ಲಾ ನನ್ನ ಹಾಡಾಗಿ
ಅಕ್ಕನ ಮನೆಗೆ ನೀ ಹೆಗಲಾಗಿ
ನನ್ನ ತವರೊಡಲ ಉರಿ ತಂಪಾಗಿ
ಪ್ರತೀ ಸಂಕ್ರಾಂತಿ ಸುಗ್ಗಿ ಸೊಂಪಾಗಿ
ಓ.. ಓ.. ಆ ಮನೆಗೂ.. ಈ ಮನೆಗೂ
ದೀಪದೊಳು ನೀನಿರಲು

ಬೆನ್ನ ಹಿಂದೆ ನೀನು ಬಂದೆ.. ತಮ್ಮಯ್ಯ.. ತಮ್ಮಯ್ಯ
ಕಣ್ಣ ಮುಂದೆ ಬಾಳಿ ಬೆಳಗೋ.. ಕಂದಯ್ಯ ನನ್ನ ತಮ್ಮಯ್ಯ

ಲಾಲಿಯ ಹಾಡಿದರು ಇಂಪಾಗಿ
ಈ ಕುಡಿಗಾಗಿ ಮುದ್ದು ನುಡಿಗಾಗಿ
ಈ ಮುದ್ದು ಲಾಲಿ ಮುಂದೆ ನಿನಗಾಗಿ
ಕರುಳ ಗೆಳೆತನ ನಮದಾಗಿ
ನಾ ನಿನಗಾಗಿ ನೀ ನನಗಾಗಿ
ಈ ಬಾಳೆಲ್ಲಾ ಜೊತೆ ಜೊತೆಯಾಗಿ
ಓ.. ಓ.. ಓ.. ಬೇವಿರಲೀ ಮೂವಿರಲೀ
ಈ ಬೆಸುಗೆ ಹೀಗೇ ಇರಲಿ

ಬೆನ್ನ ಹಿಂದೆ ನೀನು ಬಂದೆ.. ತಮ್ಮಯ್ಯ.. ತಮ್ಮಯ್ಯ
ಕಣ್ಣ ಮುಂದೆ ಬಾಳಿ ಬೆಳಗೋ.. ಕಂದಯ್ಯ ನನ್ನ ತಮ್ಮಯ್ಯ
ಅಕ್ಕ ಅನ್ನೋ ಹಾಲೆರೆವೆ, ಅಮ್ಮ ಅನ್ನೋ ಉಸಿರೆರೆವೆ
ಚಂದಮಾಮ.. ಓ ಚಂದಮಾಮ

ಬೆನ್ನ ಹಿಂದೆ ನೀನು ಬಂದೆ.. ತಮ್ಮಯ್ಯ.. ತಮ್ಮಯ್ಯ
ಕಣ್ಣ ಮುಂದೆ ಬಾಳಿ ಬೆಳಗೋ.. ಕಂದಯ್ಯ ನನ್ನ ತಮ್ಮಯ್ಯ

Thursday 1 December 2016

ಸಿಂಗಾರೀ ನನ್ನ ಮರೆಯಬೇಡ

ಚಿತ್ರ :ಸಿಂಗಾರಿ ಬಂಗಾರಿ
ಸಂಗೀತ-ಸಾಹಿತ್ಯ :ಹಂಸಲೇಖ
ಹಾಡಿದವರು S P B

ಸಿಂಗಾರೀ,,,ನನ್ನ ಮರೆಯಬೇಡ,,
ಬಾ ದೂರ ಹೋಗಬೇಡ,,,

ಸಿಂಗಾರೀ,,,ನನ್ನ ಮರೆಯಬೇಡ,,
ಬಾ ದೂರ ಹೋಗಬೇಡ,,,
ಆಣೆ ಇಡು ನನ್ನಾಣೆ ಇಡು
ಮರೆತು ಹೋಗೆನೆಂದು
ಈ ಜೊತೆಯ ಬಿಡೆನು ಎಂದೂ

ಸಿಂಗಾರೀ,,,ನನ್ನ ಮರೆಯಬೇಡ,,
ಬಾ ದೂರ ಹೋಗಬೇಡ,,,

ಕಣ್ಣಗಳು ಎರಡಿವೆ ದೃಷ್ಟಿ ಒಂದು ತಾನೇ,,
ಇಬ್ಬರ ದೇಹಕು ಉಸಿರು ಒಂದು ತಾನೇ,,
ಆಕಾಶ ಬಿದ್ದರೂ ಹಾಡೋಣ ನಾವಿಬ್ಬರೂ
ಆ ಶಿವನೆ ಕರೆದರೂ ಹೋಗೋಣ ನಾವಿಬ್ಬರೂ
ನಮಗೇ ಸಾವು ಬರಬಹುದೋ ಸ್ನೇಹ ಸಾಯದೋ

ಸಿಂಗಾರೀ,,,ನನ್ನ ಮರೆಯಬೇಡ,,
ಬಾ ದೂರ ಹೋಗಬೇಡ,,,

ತಬ್ಬಲಿ ಆದರೂ ನನಗೆ ನೀನೇ ಎಲ್ಲಾ
ಅಂಬಲಿ ಕುಡಿದರು ನನಗೆ ಚಿಂತೆಯಿಲ್ಲ
ಬಾಳೊಂದು ಯುದ್ಧವೋ ಹೋರಾಡೊಕೆ ಸಿದ್ಧವೋ
ಬೇರೆಲ್ಲ ಮಿಥ್ಯವೋ ಬಾ ಈ ಸ್ನೇಹ ಸತ್ಯವೋ
ನನ್ನ ನಿನ್ನ ಗೆಳೆತನದಾ ಹಾಡು ನಿಲ್ಲದೋ

ಸಿಂಗಾರೀ,,,,,,,,ನನ್ನ ಮರೆಯಬೇಡ,,
ಬಾ ದೂರ ಹೋಗಬೇಡ,,,

ಸಿಂಗಾರೀ,,,ನನ್ನ ಮರೆಯಬೇಡ,,
ಬಾ ದೂರ ಹೋಗಬೇಡ,,,

ಆಣೆ ಇಡು ನನ್ನಾಣೆ ಇಡು
ಮರೆತು ಹೋಗೆನೆಂದು
ಈ ಜೊತೆಯ ಬಿಡೆನು ಎಂದೂ

ಸಿಂಗಾರೀ,,,ನನ್ನ ಮರೆಯಬೇಡ,,
ಬಾ ದೂರ ಹೋಗಬೇಡ,,,

ಮನೆ ಮಾನಹೊತ್ತು ಯಾಕೆಹೋದೆ ಬೊಂಬೆ

ಚಿತ್ರ: ಪುಟ್ನಂಜ (1995)
ಸಾಹಿತ್ಯ- ಸಂಗೀತ: ಹಂಸಲೇಖ
ಗಾಯಕರು: ಮನು
(ಚಿತ್ರದಲ್ಲಿ ಈ  ಗೀತೆಯನ್ನು ಸೇರಿಸಿಲ್ಲ)

ಮನೆ ಮಾನಹೊತ್ತು ಯಾಕೆಹೋದೆ ಬೊಂಬೆ
ಬೇರು ಇಲ್ಲಅಂದ್ರೆ ಹೂವಕೊಡದು ಕೊಂಬೆ

ಎತ್ತಿಗೆ ಕೊಟ್ಟ ಏರು, ಗದ್ದೆಗೆ ಬಿಟ್ಟ ನೀರು, ಊರೇಬಿಟ್ರೆಹೆಂಗೆ ಹೇಳು
ಹೊಸ್ತಿಲುದಾಟಿ ಹೋದಳು
ಬೀಜ ಇಟ್ಟ ಭೂಮಿ, ಹಣ್ಣು ಕೊಟ್ಟ ಸ್ವಾಮಿ, ಹಳಸಿಕೊಟ್ರೆಹೆಂಗೆ ಹೇಳು
ಗೆದ್ದಿಲುಕಟ್ಟಿ ಹೋದಳು

ಓ ಪುಟ್ಟಮಲ್ಲಿ, ನೀ ಕೇಳುಇಲ್ಲಿ
ಕಳೆ ತೆಗೆಯೋ ಭರದಲ್ಲಿ ತೆನೆಕಿತ್ತಳು ಬದುಕಲ್ಲಿ
ನಾನ್ ಪುಟ್ಟನಂಜ  ನಾನ್ ಪುಟ್ಟನಂಜ
ಈ ಪ್ರೀತಿಎಂಬೋ ನಂಜುಂಡನಂಜ

ಮನೆ ಮಾನಹೊತ್ತು ಯಾಕೆಹೋದೆ ಬೊಂಬೆ
ಬೇರು ಇಲ್ಲಅಂದ್ರೆ ಹೂವಕೊಡದು ಕೊಂಬೆ

ಬ್ಯಾಸಾರಮಾಡಿ ಕುಂತ್ರೆ ಗ್ರಹಚಾರ ಬಿಡದು
ನೆಸಾರ ಸುಟ್ಟನೆಂದು ಭೂತಾಯಿ ಅಳದು

ನಾನುಅನ್ನೋ ಹೆಣ್ಣು, ಭೇದಮಾಡೋ ಕಣ್ಣು, ಪ್ರೀತಿ ಮೈಯ್ಯಹುಣ್ಣು ಕೇಳು
ಮನಸು ಮುರಿದುಹೋದಳು
ಹೆಣ್ಣು ಅಂದ್ರೆ ಮಾನ, ಮಾನ ಅಂದ್ರೆ ಮನೆ, ಮನೆಬಿಟ್ರೆ ಹೆಂಗೇ ಹೇಳು
ಮಾನ ತೆಗೆದುಹೋದಳು

ಓ ಪುಟ್ಟಮಲ್ಲಿ, ಬಾ ಕೇಳುಇಲ್ಲಿ
ಮನೆಗುಡಿಸೋ ಭರದಲ್ಲಿ ಮನೆ ಒಡೆದಳು ಮನೆಒಡತಿ
ನಾನ್ ಪುಟ್ಟನಂಜ  ನಾನ್ ಪುಟ್ಟನಂಜ
ಈ ಪ್ರೀತಿಎಂಬೋ ನಂಜುಂಡನಂಜ

ಮನೆ ಮಾನಹೊತ್ತು ಯಾಕೆಹೋದೆ ಬೊಂಬೆ
ಬೇರು ಇಲ್ಲಅಂದ್ರೆ ಹೂವಕೊಡದು ಕೊಂಬೆ

ಅಡಿಕೆಗೆ ಹೋದಮಾನ ಆನೆಗೂ ಸಿಗದು
ಮಡಿಕೆಯ ಒಡೆಯೋ ಕೈಲಿ ಸಂಸಾರ ಇರದು

ಒಂದೇಸಾರಿ ಹುಟ್ಟು, ಒಂದೇಸಾರಿ ಪ್ರೀತಿ, ಒಂದೇಸಾವು ನಂಗೆ ಕೇಳು
ನಿತ್ಯಸಾವು ಕೊಟ್ಟಳು
ಅಂಗಿಕಳಚೋಹಂಗೆ, ಮಾತುತಿರುಚೋಹಂಗೆ, ಮನಸು ಮಗುಚೋರಲ್ಲ ನಾವು
ಮಾತುತಪ್ಪಿ ಹೋದಳು

ಓ ಪುಟ್ಟಮಲ್ಲಿ, ನೀ ಕೇಳುಇಲ್ಲಿ
ಕೊಳೆ ಕಳೆಯುವ ಭರದಲ್ಲಿ ಕಣ ಹರಿದಳು ಬಾಳಲ್ಲಿ
ನಾನ್ ಪುಟ್ಟನಂಜ  ನಾನ್ ಪುಟ್ಟನಂಜ
ಈ ಪ್ರೀತಿಎಂಬೋ ನಂಜುಂಡನಂಜ

ಮನೆ ಮಾನಹೊತ್ತು ಯಾಕೆಹೋದೆ ಬೊಂಬೆ
ಬೇರು ಇಲ್ಲಅಂದ್ರೆ ಹೂವಕೊಡದು ಕೊಂಬೆ

ನನ್ನವರೇ ನನಗೆ ಕೊನೆಗೆ ಮುಳ್ಳಾದರೆನಗೆ

ಚಿತ್ರ: ಚೈತ್ರದ ಪ್ರೇಮಾಂಜಲಿ (1992)
ಸಾಹಿತ್ಯ-ಸಂಗೀತ: ಹಂಸಲೇಖ
ಗಾಯಕರು: ಎಸ್.ಪಿ.ಬಿ  ಮತ್ತು ಮಂಜುಳ ಗುರುರಾಜ್

ನನ್ನವರೇ ನನಗೆ ಕೊನೆಗೆ ಮುಳ್ಳಾದರೆನಗೆ
ಕನಸುಗಳು ಕರಗಿದವು ಆಸೆಗಳು ಸೊರಗಿದವು, ಮರುಗಿದವು
ಅಂಜಿಕೆಯೇ ನನಗೆ ಕೊನೆಗೆ ಉರುಳಾಯಿತೆನಗೆ
ನಂಬಿದರೆ ನಿಜವುಂಟು, ಕಾಣಿಸದ ಕಥೆಯುಂಟು, ವ್ಯಥೆಯುಂಟು

ವಿನೋದದ ಆಲಿಂಗನ ವಿಲಾಸದ ಆ ಚುಂಬನ
ನಾ ಮೈಮರೆತೆನು ಕರಿನಾಗದ ಗೆಳೆತನದೊಳಗೆ
ನಾ ಕಣ್ತೆರೆಯುವ ಮೊದಲೇರಿತು ವಿಷ ಮೈಯ್ಯೊಳಗೆ
ಅಪಾಯದ ಬಲಾಬಲ ದುರಾಸೆಯ ಫಲಾಫಲ
ಅದರರಿವಿಲ್ಲದೆ ಬರಿ ಪ್ರೇಮದ ಸವಿಯನು ಸವಿದೆ
ಓ ದೇವರೆ ಈ ಅತೀಆಸೆಗೆ ಮಸಿಯನು ಬಳಿದೆ

ನನ್ನವರೇ ನನಗೆ ಕೊನೆಗೆ ಮುಳ್ಳಾದರೆನಗೆ
ಕನಸುಗಳು ಕರಗಿದವು ಆಸೆಗಳು ಸೊರಗಿದವು, ಮರುಗಿದವು

ವಿವಾಹವೇ ಪ್ರವಾಹವು ವಿಮೋಚನೆ ಇಲ್ಲಿಲ್ಲವೋ
ಈ ಸುಳಿಅಲೆಯಲಿ ಎದುರೀಜಲು ಬಲಕುಸಿದಿದೆಯೋ
ನಾ ಮುಳುಗಿರುವೆಡೆ ನಿಜವೆಲ್ಲವು ಒಳಗಡಗಿದೆಯೋ
ಓ ಸಾವೆ ನೀ ದಯಾಮಯ ಈ ನೋವಿಗೆ ತೋರು ಉದಯ
ಈ ಬದುಕಿನಜೊತೆ ಬಯಸುವವರು ನಯವಂಚಕರೇ
ಆ ಸವಿನುಡಿಯಲಿ ವಿಷ ಉಣಿಸುವ ಕೊಲೆಪಾತಕರೇ

ಅಂಜಿಕೆಯೇ ನನಗೆ ಕೊನೆಗೆ ಉರುಳಾಯಿತೆನಗೆ
ನಂಬಿದರೆ ನಿಜವುಂಟು ಕಾಣಿಸದ ಕಥೆಯುಂಟು, ವ್ಯಥೆಯುಂಟು
ನನ್ನವರೇ ನನಗೆ ಕೊನೆಗೆ ಮುಳ್ಳಾದರೆನಗೆ
ಕನಸುಗಳು ಕರಗಿದವು ಆಸೆಗಳು ಸೊರಗಿದವು, ಮರುಗಿದವು

ದಾರಿಬಿಡು ವಿಧಿಯೇ ವಿಧಿಯೇ ಕರುಣಾಳುವಾಗಿ

ಚಿತ್ರ: ಚೈತ್ರದ ಪ್ರೇಮಾಂಜಲಿ (1992)
ಸಾಹಿತ್ಯ-ಸಂಗೀತ: ಹಂಸಲೇಖ
ಗಾಯಕರು: ಮಂಜುಳ ಗುರುರಾಜ್

ದಾರಿಬಿಡು ವಿಧಿಯೇ ವಿಧಿಯೇ ಕರುಣಾಳುವಾಗಿ
ಬದುಕಿರಲು ಮನಸಿಲ್ಲ ಬದುಕಿಸಲು ತಿಳಿದಿಲ್ಲ, ಉಸಿರಿಲ್ಲ
ಕರುಣೆಯಿಡು ವಿಧಿಯೇ ವಿಧಿಯೇ ಶುಭರಾಗವಾಗಿ
ತಾಯೊಡಲು ಉಯ್ಲಿಡಲು ಕಂಬನಿಯ ನಡುಗಡಲು, ಪ್ರಳಯದೊಳು

ನವೋದಯ ಈ ತಾಯಿಗೆ ಶುಭೋದಯ ಈ ಬಾಳಿಗೆ
ಈ ಮಕ್ಕಳ ಮನವೊಲಿಸುವ ಕಲೆ ಹೆತ್ತವರಿಗಿದೆ
ಈ ಮಕ್ಕಳ ಕಣ್ಣೊರೆಸಲು ಬೆಲೆ ಅತ್ತವರಿಗಿದೆ
ಅಮಾನುಷ ಸಮಾಜವು ಕಠೋರವು ಸಮೂಹವು
ಈ ಯುಗ ಯುಗದಲಿ ಥರಥರ ವಿಧ ಕಾಯಿದೆಗಳಿವೆ
ನೀ ಮನಸಿಗೆ ಸರಿ ತೋರಿದಕಡೆ ನಡೆದರೆ ಶುಭವೆ

ದಾರಿಬಿಡು ವಿಧಿಯೇ ವಿಧಿಯೇ ಕರುನಾಳುವಾಗಿ
ನೆನಪುಗಳು ಮರೆತಿಲ್ಲ ಕುಳಿತಿರಲು ಬಿಡುತಿಲ್ಲ ಬಿಡುತಿಲ್ಲ

ಬಾನಲ್ಲಿ ನಿನ್ನಿಂದ ಸೂರ್ಯೋದಯ

ಚಿತ್ರ: ನೀನು ನಕ್ಕರೆ ಹಾಲು ಸಕ್ಕರೆ (1991)
ಸಾಹಿತ್ಯ- ಸಂಗೀತ: ಹಂಸಲೇಖ
ಗಾಯಕರು: ಕೆ.ಎಸ್.ಚಿತ್ರಾ

ಶರಣು..... ಶರಣೆನುವೆ ಶರಣೆನುವೆ
ಓ ಪ್ರಭುವೇ ಶರಣೆನುವೆ

ಬಾನಲ್ಲಿ ನಿನ್ನಿಂದ ಸೂರ್ಯೋದಯ...
ಬಾನಲ್ಲಿ ನಿನ್ನಿಂದ ಸೂರ್ಯೋದಯ
ಬಾಳಲ್ಲಿ ನಿನ್ನಿಂದ ಅರುಣೋದಯ
ಬಾನಲ್ಲಿ ನಿನ್ನಿಂದ ಚಂದ್ರೋದಯ
ಆನಂದ ನಿನ್ನಿಂದ ಕರುಣಾಮಯ
ಮೋಡ ಮಳೆಯಾಗಲು, ನೀರು ಭುವಿಸೇರಲು
ಭೂಮಿ ಹಸಿರಾಗಲು, ಲೋಕ ಗೆಲುವಾಗಲು
ಓಂ.. ಓಂ.. ಓಂ.. ಓಂ.. ಓಂ.. ಓಂ
ನೀ ಕಾರಣನು ದೇವ..
ಬಾನಲ್ಲಿ ನಿನ್ನಿಂದ ಸೂರ್ಯೋದಯ
ಬಾಳಲ್ಲಿ ನಿನ್ನಿಂದ ಅರುಣೋದಯ

ಈ ಲತೆನೀನೆ.. ಈ ಲತೆನೀನೆ ಈ ಸುಮನೀನೆ
ಈ ಸುಮದಂದ ಗಂಧವು ನೀನೆ
ಕಲ್ಲಲ್ಲಿ ಮುಳ್ಳಲ್ಲಿ ಮಣ್ಣಲ್ಲಿಯು
ಗಿರಿಯಲ್ಲಿ ಗುಹೆಯಲ್ಲಿ ಬನದಲ್ಲಿಯು
ಬಾನಾಡಿ ಕೊರಳಲ್ಲಿ ಇಂಪಾಗಿಯು
ತಂಗಾಳಿ ಸುಳಿದಾಗ ತಂಪಾಗಿಯು
ತಂಗಾಳಿ ಸುಳಿದಾಗ ತಂಪಾಗಿಯು
ಹಣ್ಣ ರುಚಿಯಲ್ಲಿಯು ಜೇನಸಿಹಿಯಲ್ಲಿಯು
ಹಾಲಬೆಳಕಲ್ಲಿಯು ರಾತ್ರಿ ಇರುಳಲ್ಲಿಯು
ಓಂ.. ಓಂ.. ಓಂ.. ಓಂ.. ಓಂ.. ಓಂ
ನೀನೆ ಇರುವೆ ದೇವ...
ಬಾನಲ್ಲಿ ನಿನ್ನಿಂದ ಸೂರ್ಯೋದಯ
ಬಾಳಲ್ಲಿ ನಿನ್ನಿಂದ ಅರುಣೋದಯ

ಈಶ್ವರ ನೀನೆ.. ಈಶ್ವರ ನೀನೆ ಶಾಶ್ವತ ನೀನೆ
ಎಲ್ಲವು ನೀನೆ ಎಲ್ಲೆಡೆ ನೀನೆ
ಸಂತೋಷ ಕೊಡುವಂಥ ನಗೆಯಲ್ಲಿಯು
ಕಂದಂಗೆ ತಾಯ್ಕೊಡುವ ಮುತ್ತಲ್ಲಿಯು
ಹಿತವಾದ ಸಂಗೀತ ಸ್ವರದಲ್ಲಿಯು
ಕವಿಯಾಡೊ ಸವಿಯಾದ ಮಾತಲ್ಲಿಯು
ಕವಿಯಾಡೊ ಸವಿಯಾದ ಮಾತಲ್ಲಿಯು
ಬೆಂಕಿ ಕಿಡಿಯಲ್ಲಿಯು ನೀರ ಹನಿಯಲ್ಲಿಯು
ಕಡಲ ಒಡಲಲ್ಲಿಯು ಸಿಡಿವ ಸಿಡಿಲಲ್ಲಿಯು
ಓಂ.. ಓಂ.. ಓಂ.. ಓಂ.. ಓಂ.. ಓಂ
ನೀನೆ ಇರುವೆ ದೇವ...
ಬಾನಲ್ಲಿ ನಿನ್ನಿಂದ ಸೂರ್ಯೋದಯ
ಬಾಳಲ್ಲಿ ನಿನ್ನಿಂದ ಅರುಣೋದಯ

ಭೂಲೋಕವೆಲ್ಲಾ ನಾನು ಸುತ್ತಿ ಸುತ್ತಿ ಸುತ್ತಿ ಬಂದೆ

ಚಿತ್ರ: ಯುಗಪುರುಷ (1989)
ಸಾಹಿತ್ಯ- ಸಂಗೀತ: ಹಂಸಲೇಖ
ಗಾಯಕರು: ಎಸ್.ಪಿ.ಬಿ

ಭೂಲೋಕವೆಲ್ಲಾ ನಾನು ಸುತ್ತಿ ಸುತ್ತಿ ಸುತ್ತಿ ಬಂದೆ
ಆಸೆಯ ಮೂಟೆಯನ್ನು ಹೊತ್ತು ಹೊತ್ತು ಹೊತ್ತು ತಂದೆ

ಅಜ್ಜಿಗೆ ಅರಿವೆ ಆಸೆ ಅಪ್ಪನಿಗೆ ಅಮ್ಮನ ಆಸೆ
ಅಮ್ಮನಿಗೆ ಮಕ್ಕಳ ಆಸೆ ಮಕ್ಕಳಿಗೆ ತಾತನ ಆಸೆ
ತಾತನಿಗೆ ಅಜ್ಜಿ ಆಸೆ ಅಜ್ಜಿಗೆ ತಾತನ ಆಸೆ
ಆಸೆಯು ಇಲ್ಲದೆ ಜಗವೇಇಲ್ಲ ಆಸೆಯೇ ದುಃಖದ ಮೂಲ
ಬುದ್ದಂ ಶರಣಂ ಗಚ್ಛಾಮಿ ಆಸೆಯ ಬಿಡಿಸೋ ಮಹಾಸ್ವಾಮಿ
ಬುದ್ದಂ ಶರಣಂ ಗಚ್ಛಾಮಿ ಆಸೆಯ ಬಿಡಿಸೋ ಮಹಾಸ್ವಾಮಿ

ಸೂಜಿಕಣ್ಣಿನಲ್ಲಿ ದೊಡ್ಡ ಒಂಟೆ ಹೋದರೂನು ಹೋಗಬಹುದು
ಅಯ್ಯಯ್ಯೋ ಜನರಿಗೆ ದುಡ್ಡಿನಾಸೆ ಹೋಗದು
ಚಟ್ಟಹತ್ತಿ ಉರಿಯೋ ಹೆಣ ಮೇಲೆ ಎದ್ದರೂನು ಏಳಬಹುದು
ಅಮ್ಮಮ್ಮೋ ಗಂಡಿಗೆ ಹೆಣ್ಣಿನಾಸೆ ಸಾಯದು
ಭೂಮಿಯೇ ಮುಗ್ದುಬಂದರು ಆಕಾಶ ಬಿದ್ದುಹೋದರು
ಮರುಭೂಮಿ ನೀರೆ ಆದರೂ ಸಾಗರವೆ ಬತ್ತಿಹೋದರು
ಅತ್ತ ಹೋಗದು ಇತ್ತ ಹೋಗದು ಬತ್ತಿ ಹೋಗದು ಸತ್ತು ಹೋಗದ
ಆಸೆಯ ಮೂಟೆಯನ್ನು ಹೊತ್ತು ಹೊತ್ತು ಹೊತ್ತು ತಂದೆ
ಭೂಲೋಕವೆಲ್ಲಾ ನಾನು ಸುತ್ತಿ ಸುತ್ತಿ ಸುತ್ತಿ ಬಂದೆ

ಆಸೆ ದುಃಖ.. ದುಃಖ ಆಸೆ..

ಕಾರ್ಪೋರೇಶನ್ ಕೊಳಾಯಿಯಲ್ಲಿ ಹಾಲು ಬಂದು ನಿಂತು ಹೋಗಬಹುದು
ಆಸೆಯ ಹಿಂದಿನ ಕಣ್ಣನೀರು ನಿಲ್ಲದು
ರೇಷನ್ ಕಾರ್ಡಿನಲ್ಲಿ ಒಳ್ಳೆ ಅಕ್ಕಿ ಸಿಕ್ಕರೂನು ಸಿಕ್ಕಬಹುದು
ಆಸೆಯ ಕ್ಯೂವಿಗೆ ಎಂದೂ ಕೊನೆಯೇ ಸಿಕ್ಕದು
ಬರಗಾಲ ನಿಂತುಹೋದರು ಯುದ್ಧಗಳೇ ಇಲ್ಲವಾದರು
ಜನಸಂಖ್ಯೆ ಕಡಿಮೆಯಾದರು ಬೆಲೆಎಲ್ಲಾ ಇಳಿದುಹೋದರು
ಆಸೆ ಎನ್ನುವ ಸರಕುಧಾರಣೆ ಕೆಳಗೆ ಇಳಿಯುವ ಆಸೆ ಕಾನನೆ
ಭೂಲೋಕವೆಲ್ಲಾ ನಾನು ಸುತ್ತಿ ಸುತ್ತಿ ಸುತ್ತಿ ಬಂದೆ
ಆಸೆಯ ಮೂಟೆಯನ್ನು ಹೊತ್ತು ಹೊತ್ತು ಹೊತ್ತು ತಂದೆ
ಅಜ್ಜಿಗೆ ಅರಿವೆ ಆಸೆ ಅಪ್ಪನಿಗೆ ಅಮ್ಮನ ಆಸೆ
ಅಮ್ಮನಿಗೆ ಮಕ್ಕಳ ಆಸೆ ಮಕ್ಕಳಿಗೆ ತಾತನ ಆಸೆ
ತಾತನಿಗೆ ಅಜ್ಜಿ ಆಸೆ ಅಜ್ಜಿಗೆ ತಾತನ ಆಸೆ
ಆಸೆಯು ಇಲ್ಲದೆ ಜಗವೇಇಲ್ಲ ಆಸೆಯೇ ದುಃಖದ ಮೂಲ
ಬುದ್ದಂ ಶರಣಂ ಗಚ್ಛಾಮಿ ಆಸೆಯ ಬಿಡಿಸೋ ಮಹಾಸ್ವಾಮಿ
ಬುದ್ದಂ ಶರಣಂ ಗಚ್ಛಾಮಿ ಆಸೆಯ ಬಿಡಿಸೋ ಮಹಾಸ್ವಾಮಿ

ಏಯ್ ನಿನ್ನಳೆ ಏಯ್

ಚಿತ್ರ: ಹೊಸಜೀವನ (1990)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ

ಏಯ್ ನಿನ್ನಳೆ ಏಯ್ ಏಯ್ ನಿನ್ನಳೆ ಏಯ್
ಯಾರತ್ರ ನಿಂದೆಲ್ಲ ಏಯ್
ಚಾಕು ಚೈನು ನನ್ನ ಎಡಗೈಯಿ ಬಲಗೈಯಿ ಬೇವರ್ಸಿ ಮೈಯ್ಯಿ
ಬ್ಲೇಡು ಬಾಟ್ಲು ನನ್ನ ದೊಡ್ಡ್ತಮ್ಮ ಚಿಕ್ತಮ್ಮ ಸಾರಾಯಿಉಯ್ಯಿ ಇವ್ನಳೆ ಏಯ್
ಸಾಯಕ್ಕು ಸಾಯ್ಸಕ್ಕು ನಾನು ಸೈ
ಏಯ್ ನಿನ್ನಳೆ ಏಯ್ ಏಯ್ ನಿನ್ನಳೆ ಏಯ್
ಏಯ್ ನಿನ್ನಳೆ ಏಯ್ ಏಯ್ ನಿನ್ನಳೆ ಏಯ್

ಊರಿಗೆ ಬೆಂಕಿಬಿದ್ರೇನು ನಂಗೆ ಆ ಬೆಂಕಿಲ್ಲೇ ಬೀಡಿ ಹಚ್ತೀನಿ ಹಿಂಗೆ
ಯಾರಿಗೆ ಹೊಟ್ಟೆವುರ್ದ್ರೇನು ನಂಗೆ ಇಲ್ಲಿ ನನ್ಹೊಟ್ಟೆ ಉರಿಯೋದೆ ಮುಖ್ಯನಂಗೆ
ದೇವರ ಹುಂಡಿ ಒಡೆಯೋನು ಕಳಶನೆ ಕದಿಯೋನು
ನಾಲ್ಕುಮಂದಿಯೊಳಗೆ ಶಾಕಿರ್ದಾರ
ದಿನವಿಡೀ ಲಂಚ ನುಂಗೋನ್ ಗೆ  ಕಳ್ಳಭಟ್ಟಿ ಇಳಿಸೋನ್ ಗೆ
ನಾನೇ ಸುಂಕ ಕೇಳೋ ಪಾಳೇಗಾರ
ಚಾಕು ಚೈನು ನನ್ನ ಎಡಗೈಯಿ ಬಲಗೈಯಿ ಬೇವರ್ಸಿ ಮೈಯ್ಯಿ
ಬ್ಲೇಡು ಬಾಟ್ಲು ನನ್ನ ದೊಡ್ಡ್ತಮ್ಮ ಚಿಕ್ತಮ್ಮ ಸಾರಾಯಿಉಯ್ಯಿ ಇವ್ನಳೆ ಏಯ್
ಸಾಯಕ್ಕು ಸಾಯ್ಸಕ್ಕು ನಾನು ಸೈ
ಏಯ್ ನಿನ್ನಳೆ ಏಯ್..  ಏಯ್ ನಿನ್ನಳೆ ಏಯ್

ಹೆಂಡ್ತಿಗೆ ಮೋಸ ಮಾಡ್ತಾನೆ ಒಬ್ಬ ಸಂಬಳ ಕೊಡದೇನೆ ಏರ್ತಾನೆ ಹೆಂಡದ್ ದಿಬ್ಬ
ಬಡ್ಡಿಗೆ ಬಡವರ್ನ ಕೀಳ್ತನೊಬ್ಬ ಇಂಥ ಕಳ್ರನ್ನ ಸುಲಿಯೋದೆ ನಂಗೆ ಹಬ್ಬ
ಜನಗಳ ತಿದ್ದಕ್ಕಾಗಲ್ಲ ಮೇಲೆತ್ತಕ್ಕಾಗಲ್ಲ ಎಲ್ಲಾ ಕಳ್ರ ಸಂತೆ ಆಗೋಯ್ತಂತೆ
ಉಗಿದರೆ ಲೋಕ ಬಗ್ತೈತೆ ಕೇಳಿದ್ದು ಕೊಡ್ತೈತೆ ತಿಂದುಕುಡ್ದು ಸಾಯ್ತಿನಿ ನಂಗೇನ್ ಚಿಂತೆ
ಚಾಕು ಚೈನು ನನ್ನ ಎಡಗೈಯಿ ಬಲಗೈಯಿ ಬೇವರ್ಸಿ ಮೈಯ್ಯಿ
ಬ್ಲೇಡು ಬಾಟ್ಲು ನನ್ನ ದೊಡ್ಡ್ತಮ್ಮ ಚಿಕ್ತಮ್ಮ ಸಾರಾಯಿಉಯ್ಯಿ ಇವ್ನಳೆ ಏಯ್
ಸಾಯಕ್ಕು ಸಾಯ್ಸಕ್ಕು ನಾನು ಸೈ
ಏಯ್ ಏಯ್ ನಿನ್ನಳೆ ಏಯ್  ಏಯ್ ನಿನ್ನಳೆ ಏಯ್
ಯಾರತ್ರ ನಿಂದೆಲ್ಲ ಏಯ್
ಚಾಕು ಚೈನು ನನ್ನ ಎಡಗೈಯಿ ಬಲಗೈಯಿ ಬೇವರ್ಸಿ ಮೈಯ್ಯಿ
ಬ್ಲೇಡು ಬಾಟ್ಲು ನನ್ನ ದೊಡ್ಡ್ತಮ್ಮ ಚಿಕ್ತಮ್ಮ ಸಾರಾಯಿಉಯ್ಯಿ ಇವ್ನಯ್ಯನ್ ಏಯ್
ಸಾಯಕ್ಕು ಸಾಯ್ಸಕ್ಕು ನಾನು ಸೈ
ಏಯ್ ನಿನ್ನಳೆ ಏಯ್  ಏಯ್ ನಿನ್ನಳೆ ಏಯ್

ಮಂಜು ಮಂಜು ಬೆಳ್ಳಿ ಮಂಜು ಮಂಜಿನ ರೇಷಿಮೆರಾಶಿಯಲಿ

ಚಿತ್ರ: ಹೂವುಹಣ್ಣು (1993)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ರಾಜೇಶ್ ಕೃಷ್ಣನ್ & ಕೆ. ಎಸ್. ಚಿತ್ರ

ಮಂಜು ಮಂಜು ಬೆಳ್ಳಿ ಮಂಜು ಮಂಜಿನ ರೇಷಿಮೆರಾಶಿಯಲಿ
ಪ್ರೇಮಿಸುವ ಹಿಮಕಾಶಿಯಲಿ..
ಮಂಜು ಮಂಜು ಬೆಳ್ಳಿ ಮಂಜು ಮಂಜು ಮಂಜು

ಆ ಸಂಪಿಗೆ ಹೂ ಹೋಲುವ ನಾಜೂಕಿನ ಈ ಮೂಗಿನ ಅಂದದ..
ಮುತ್ತಿನ ಮೂಗುತಿ ಹಿಮಬಿಂದುವೇ
ಮಂಜು ಮಂಜು ಬೆಳ್ಳಿ ಮಂಜು ಮಂಜಿನ ರೇಷಿಮೆರಾಶಿಯಲಿ
ಪ್ರೇಮಿಸುವ ಹಿಮಕಾಶಿಯಲಿ..
ಮಂಜು ಮಂಜು ಬೆಳ್ಳಿ ಮಂಜು ಮಂಜು ಮಂಜು

ಈ ಹಸುರಿನ ಈ ವನಜನ ಮುಂಜಾವಿನ ಈ ಜೋಡಿಗೆ ಸುರಿದರು..
ಮಂಜಿನ ರತುನದ ಹಿಮಮಣಿಗಳ
ಮಂಜು ಮಂಜು ಬೆಳ್ಳಿ ಮಂಜು ಮಂಜಿನ ರೇಷಿಮೆರಾಶಿಯಲಿ
ಪ್ರೇಮಿಸುವ ಹಿಮಕಾಶಿಯಲಿ
ಮಂಜು ಮಂಜು ಬೆಳ್ಳಿ ಮಂಜು ಮಂಜು ಮಂಜು

ಓ ಮೇಘವೇ ನಿಧಾನವಾಗಿ ನೀ ಬಾ

.ಚಿತ್ರ: ರಣರಂಗ (1988)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಹ್ಯಾಟ್ರಿಕ್ ಹೀರೋ & ಅನುರಾಧಾ

I Love You.. I Love You.. I Love You.
ಹೋ..  ಮೇಘವೇ ನಿಧಾನವಾಗಿ ನೀ ಬಾ
ಹೇ..  ಕಾಲವೇ ವಿಳಂಬವಾಗಿ ನೀ ಬಾ
ನನ್ನ ಚಂದ್ರನ ಮುಚ್ಚಿಕೊಳ್ಳದೇ
ನನ್ನ ಇನಿಯನ ಕದ್ದುನೋಡದೇ
ದೂರ ಹೋಗಿ ನಿಲ್ಲೇ ಮೇಘವೇ ಕಾಲವೇ ಮೇಘವೇ ಕಾಲವೇ

I Love You.. I Love You.. I Love You.
ಹೋ.. ರಾಗವೇ ಸರಾಗವಾಗಿ ನೀ ಬಾ
ಹೇ.. ಕಾವ್ಯವೇ ನಿರಾಳವಾಗಿ ನೀ ಬಾ
ನನ್ನ ತಾರೆಯ ಹಾಡಿ ಹೊಗಳಲು
ನನ್ನ ಇನಿಯಳ ಮುದ್ದು ಮಾಡಲು
ಬೇಗ ಬೇಗ ಬಾರೆ ರಾಗವೇ ಕಾವ್ಯವೇ ರಾಗವೇ ಕಾವ್ಯವೇ

ಈ ಕಣ್ಣೆ ನನ್ನ ರಾಗ ಈ ಹೆಣ್ಣೆ ನನ್ನ ಕಾವ್ಯ
ನೀನೊಮ್ಮೆ ನಗುತ ನೋಡು
ಇದ ನಾ ಬರೆವೆ ನೂರಾರು ಹಾಡು
ಮಾತನಾಡೊ ಉಸಿರು ಅಹಾ ತಾಳ ಹಾಕಿದೆ
ತೂಗಿ ಆಡೋ ವಯಸು ಚಪ್ಪಾಳೆ ತಟ್ಟಿದೆ
ಕೇಳೆ ನಾನು ನಿನ್ನಮೇಲೆ ಬರೆದ ಪಲ್ಲವಿ
I Love You.. I Love You.. I Love You.

ತಂಗಾಳಿ ಬಾರೆ ಬೇಗ ಈ ಹಾಡ ಕೇಳು ಈಗ
ಹಾಡಿದನು ಒಂದೇ ಸಾಲು
ನನಗೆ ಭೂಮಿಲ್ಲೇ ನಿಂತಿಲ್ಲ ಕಾಲು
ಹಾಡುವಾಗ ಇವನ ಕಣ್ಣನ್ನು ನೋಡು ಬಾ
ನೋಟದಲ್ಲೆ ಸೆಳೆವ ಈ ಮೋಡಿ ನೋಡು ಬಾ
ಕೇಳೇ ಇವನು ನನ್ನ ಮೇಲೆ ಬರೆದ ಪಲ್ಲವಿ

I Love You.. I Love You.. I Love You.
ಹೋ..  ಮೇಘವೇ ನಿಧಾನವಾಗಿ ನೀ ಬಾ
ಹೋ..  ಕಾಲವೇ ವಿಳಂಬವಾಗಿ ನೀ ಬಾ
ನನ್ನ ತಾರೆಯ ಮುಚ್ಚಿಕೊಳ್ಳದೇ
ನನ್ನ ಚಂದ್ರನ ಕದ್ದುನೋಡದೇ
ದೂರ ಹೋಗಿ ನಿಲ್ಲೇ ಮೇಘವೇ ಕಾಲವೇ ಮೇಘವೇ ಕಾಲವೇ

ರಾಜ ರಾಜ ಶಿವರಾಜ ಕಲ್ಲು ಮುಳ್ಳಲ್ಲಿ ಹುಟ್ಟಿಬಂದ ರೋಜ

ಚಿತ್ರ: ಚಂದ್ರೋದಯ (1999)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಹ್ಯಾಟ್ರಿಕ್ ಹೀರೋ

ರಾಜ ರಾಜ ರಾಜ ರಾಜ ನನ್ನ ಗಲ್ಲಿಗೇ ನಾನೇ ಮಹಾರಾಜ
ರಾಜ ರಾಜ ಶಿವರಾಜ ಕಲ್ಲು ಮುಳ್ಳಲ್ಲಿ ಹುಟ್ಟಿಬಂದ ರೋಜ
ನಾನು ಹಾಡೋದು ಬೆನ್ನುತಟ್ಟೋ ಜನರಿಗೆ
ನಾನು ಬಾಗೋದು ಅನ್ನಕೊಟ್ಟ ದೇವರಿಗೆ
ನಾನು ಹಾಡೋದು ಬೆನ್ನುತಟ್ಟೋ ಜನರಿಗೆ
ನಾನು ಬಾಗೋದು ಅನ್ನಕೊಟ್ಟ ದೇವರಿಗೆ
ರಾಜ ರಾಜ ರಾಜ ರಾಜ ನನ್ನ ಗಲ್ಲಿಗೇ ನಾನೇ ಮಹಾರಾಜ
ರಾಜ ರಾಜ ಶಿವರಾಜ ಕಲ್ಲು ಮುಳ್ಳಲ್ಲಿ ಹುಟ್ಟಿಬಂದ ರೋಜ

ನೋಡಲಾರೆ ಸಹಿಸಲಾರೆ ಇಲ್ಲದವನ ಅಳುವ
ಅವನಿಗಾಗೆ ಹೆದರದೇನೆ ಮಾಡಬಲ್ಲೆ ಕಳುವ..
ನೋಡಲಾರೆ ಸಹಿಸಲಾರೆ ಇಲ್ಲದವನ ಅಳುವ
ಅವನಿಗಾಗೆ ಹೆದರದೇನೆ ಮಾಡಬಲ್ಲೆ ಕಳುವ
ನನ್ನ ವಿಳಾಸ ಬಡವನ ಬೀದಿಯಲ್ಲಿ
ನನ್ನ ಉಲ್ಲಾಸ ನೊಂದವನ ನಡುವಲಿ
ರಾಜ ರಾಜ ರಾಜ ರಾಜ ನನ್ನ ಗಲ್ಲಿಗೇ ನಾನೇ ಮಹಾರಾಜ
ರಾಜ ರಾಜ ಶಿವರಾಜ ಕಲ್ಲು ಮುಳ್ಳಲ್ಲಿ ಹುಟ್ಟಿಬಂದ ರೋಜ

ಇಂಪಿನಿಂಪಿನ ಕಂಪುಕಂಪಿನ ಕನ್ನಡದ ನುಡಿಮುತ್ತು
ಇಂದು ನಾಳೆಗೆ ನನ್ನ ಬಾಳಿಗೆ ಸುಖವ ಕೊಡೊ ಸಂಪತ್ತು..
ಇಂಪಿನಿಂಪಿನ ಕಂಪುಕಂಪಿನ ಕನ್ನಡದ ನುಡಿಮುತ್ತು
ಇಂದು ನಾಳೆಗೆ ನನ್ನ ಬಾಳಿಗೆ ಸುಖವ ಕೊಡೊ ಸಂಪತ್ತು
ಏನಿದೆ ಅಂತಾರೆ ಈ ಮಣ್ಣಿನಲ್ಲಿ
ಎಲ್ಲ ಇದೆ ತನ್ನ್ ನೋಡೋ ಕಣ್ಣಿನಲ್ಲಿ
ರಾಜ ರಾಜ ರಾಜ ರಾಜ ನಮ್ಮ ಗಲ್ಲಿಗೇ ನೀನೇ ಮಹಾರಾಜ
ರಾಜ ರಾಜ ಶಿವರಾಜ ಕಲ್ಲು ಮುಳ್ಳಲ್ಲಿ ಹುಟ್ಟಿಬಂದ ರೋಜ  
ನಾನು ಹಾಡೋದು ಬೆನ್ನುತಟ್ಟೋ ಜನರಿಗೆ
ನಾನು ಬಾಗೋದು ಅನ್ನಕೊಟ್ಟ ದೇವರಿಗೆ
........

ಲೋಕ ಲೋಕ ನೋಡೋದು ಹೀಗೇನೆ

ಚಿತ್ರ: ನವತಾರೆ (1991)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ & ಕೆ. ಎಸ್. ಚಿತ್ರ

ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್

ಓ.. ಲ ಲಾ ಲ ಲಾ.. ಲ ಲ ಲ ಲಾ ಲ ಲ ಲಾ ಲ ಲ...
ಲೋಕ ಲೋಕ ನೋಡೋದು ಹೀಗೇನೆ
ಸ್ನೇಹ ಸ್ನೇಹ ಕಾಣೋದು ಹೀಗೇನೆ
ಸ್ನೇಹಕ್ಕೆ ಬೇಕಿಲ್ಲ ಸಂಭಾವನೆ ಸ್ನೇಹಕ್ಕೆ ಸ್ನೇಹಾನೆ ಸಂಪಾದನೆ
ಸ್ನೇಹಕ್ಕೆ ಮೂಲನೆ ಸಂವೇದನೆ ಸ್ನೇಹಕ್ಕೆ ಬೇಕಯ್ಯ ಸದ್ಭಾವನೆ
ಗೆಳಯ ಗೆಳತಿ ನಾವಿಬ್ಬರು
ಲೋಕ ಲೋಕ ನೋಡೋದು ಹೀಗೇನೆ
ಸ್ನೇಹ ಸ್ನೇಹ ಕಾಣೋದು ಹೀಗೇನೆ
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್

ಸ್ನೇಹ ಒಂದು ಉತ್ತೇಜನ ಸ್ನೇಹ ಒಂದು ಸಂಜೀವನ
ಸ್ನೇಹವೆಂಬ ತಂಗಾಳಿಗೆ ಬಾಳಿನಲ್ಲಿ ರೋಮಾಂಚನ
ಹೋ.. ಅಂತರಂಗದಲ್ಲಿ ಸ್ನೇಹರಾಗದಲ್ಲಿ
ಹೆಣ್ಣುಗಂಡಿಗಿಲ್ಲಿ ಬೇಧಭಾವ ಎಲ್ಲಿ
ಸ್ನೇಹಕಾಗಿ ಲೋಕ ಆಯಿತಯ್ಯ ಮೂಕ  ಹೋ..
ಒಹೋ ಒಹೊ ಲ ಲ ಲಾ ಲ ಲ...
ಲೋಕ ಲೋಕ ನೋಡೋದು ಹೀಗೇನೆ
ಸ್ನೇಹ ಸ್ನೇಹ ಕಾಣೋದು ಹೀಗೇನೆ
....


ಹೂವಿನಲ್ಲಿ ಗಂಧ ಇದೆ ಗಾಳಿಯಲ್ಲಿ ವೇಗ ಇದೆ
ಹೂವು ಗಾಳಿ ಬೇರಾದರೂ ಸ್ನೇಹದಿಂದ ಒಂದಾಗಿದೆ
ಈ ಗಾಳಿ ಬೀಸಬೇಕು ಗಂಧ ಹರಡಬೇಕು
ದೂರ ತೀರವೆಲ್ಲಾ ಕಂಪು ಚಲ್ಲಬೇಕು
ಸ್ನೇಹ ಒಂದು ತ್ಯಾಗ ಸ್ನೇಹ ಒಂದು ಯೋಗ  ಓ..
ಲ ಲ ಲಾ ಲ ಲ...
ಲೋಕ ಲೋಕ ನೋಡೋದು ಹೀಗೇನೆ
ಸ್ನೇಹ ಸ್ನೇಹ ಕಾಣೋದು ಹೀಗೇನೆ
ಸ್ನೇಹಕ್ಕೆ ಬೇಕಿಲ್ಲ ಸಂಭಾವನೆ ಸ್ನೇಹಕ್ಕೆ ಸ್ನೇಹಾನೆ ಸಂಪಾದನೆ
ಸ್ನೇಹಕ್ಕೆ ಮೂಲನೆ ಸಂವೇದನೆ ಸ್ನೇಹಕ್ಕೆ ಬೇಕಯ್ಯ ಸದ್ಭಾವನೆ
ಗೆಳಯ ಗೆಳತಿ ನಾವಿಬ್ಬರು
ಲೋಕ ಲೋಕ ನೋಡೋದು ಹೀಗೇನೆ
ಸ್ನೇಹ ಸ್ನೇಹ ಕಾಣೋದು ಹೀಗೇನೆ
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್

ಜನನ ಮರಣಗಳೆರಡೂ ಕುರುಡು

ಚಿತ್ರ: ಪೋಲಿಹುಡುಗ (1989)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ

ಜನನ ಮರಣಗಳೆರಡೂ ಕುರುಡು
ಮುಂದೆ ಹೋಗದು ಹಿಂದೆ ಬಾರದು ನಿಂತಲ್ಲಿ ನಿಲ್ಲದು
ಸ್ನೇಹ ಪ್ರೀತಿಗಳೆರಡೂ ಕುರುಡು
ದೂರ ಹೋಗದು ಬೇರೆ ಆಗದು ಕಣ್ಣಿಗೆ ಕಾಣದು
ನಾಳೆ ಗೊತ್ತಿಲ್ಲದ ಬಾಳಿಗೆ ಈ ದಿನ ಬರ್ತ್ ಡೇ ಬರ್ತ್ ಡೇ
ಜನನ ಮರಣಗಳೆರಡೂ ಕುರುಡು
ಮುಂದೆ ಹೋಗದು ಹಿಂದೆ ಬಾರದು ನಿಂತಲ್ಲಿ ನಿಲ್ಲದು

ಕುಣಿಯುವ ಸಡಗರ ನಮಗೆ ಇದೆ
ಕುಣಿಸುವ ಢಮರುಗ ಯಾರಲಿದೆ.. ಯಾರಲಿದೆ, ಹೆಣ್ಣಲಿದೆ
ನಲಿಸುವ ರಾಗ ಒಲಿಸುವ ವೇಗ
ಆ ಹೆಣ್ಣಿನಲ್ಲಿದೆ ಆ ಕಣ್ಣಿನಲ್ಲಿದೆ ಆ ನೋಟದಲ್ಲಿದೆ ಮೈಮಾಟದಲ್ಲಿದೆ
ನಾಳೆ ಗೊತ್ತಿಲ್ಲದ ಬಾಳಿಗೆ ಈ ದಿನ ಬರ್ತ್ ಡೇ ಬರ್ತ್ ಡೇ
ಜನನ ಮರಣಗಳೆರಡೂ ಕುರುಡು
ಮುಂದೆ ಹೋಗದು ಹಿಂದೆ ಬಾರದು ನಿಂತಲ್ಲಿ ನಿಲ್ಲದು

ಹೂವಿಗೆ ಪ್ರತಿದಿನ ಜನುಮದಿನ
ಹಾರುವ ದುಂಬಿಗೆ ಏನುದಿನ.. ಏನುದಿನ, ಮದುವೆದಿನ
ಅರಳುವ ಗುಟ್ಟು ಬಯಲಿಗೆ ಬಿತ್ತು
ಬಾರೆ ನಾಳೆ ಎನ್ನದೆ ಬಾರೆ ವೇಳೆ ಮಾಡದೆ
ಬೇರೆ ರಾಗಹಾಡದೆ ಬಾರೆ ತಾಳ ತಪ್ಪದೆ
ನಾಳೆ ಗೊತ್ತಿಲ್ಲದ ಬಾಳಿಗೆ ಈ ದಿನ ಬರ್ತ್ ಡೇ ಬರ್ತ್ ಡೇ
ಜನನ ಮರಣಗಳೆರಡೂ ಕುರುಡು
ಮುಂದೆ ಹೋಗದು ಹಿಂದೆ ಬಾರದು ನಿಂತಲ್ಲಿ ನಿಲ್ಲದು
ಸ್ನೇಹ ಪ್ರೀತಿಗಳೆರಡೂ ಕುರುಡು
ದೂರ ಹೋಗದು ಬೇರೆ ಆಗದು ಕಣ್ಣಿಗೆ ಕಾಣದು

ಯಾರು ಪೋಲಿ

ಚಿತ್ರ: ಪೋಲಿಹುಡುಗ (1989)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ & ಮಂಜುಳಾ ಗುರುರಾಜ್

ಯಾರು ಪೋಲಿ..  ಪೋಲಿ ಊರಲ್ಲಿ ನಾನೇನಾ
ಬೇರೆ ಎಲ್ಲಾ.. ಎಲ್ಲಾ ತುಂಬಾನೆ ಸಾಚಾನಾ
ಭೂತಗಾಜು.. ಗಾಜು  ತನ್ನಿರಿ ಹಾಕೋಣ
ಸಾಚಾ ಯಾರು.. ಯಾರು ಪತ್ತೆಯ ಮಾಡೋಣ
ಹುಡುಕಾಡಿ ಅವನನ್ನೇ ಕೇಳೋಣ
ಯಾರು ಪೋಲಿ..  ಪೋಲಿ ಊರಲ್ಲಿ ನಾನೇನಾ
ಬೇರೆ ಎಲ್ಲಾ.. ಎಲ್ಲಾ ತುಂಬಾನೆ ಸಾಚಾನಾ

ಊರೆಲ್ಲಾ ಪೋಲಿ ಬಿದ್ದಿದೆ ನೀಲಿಯ ಚಿತ್ರಕ್ಕೆ ಕಳ್ಳ ಸಾಲು ನಿಂತಿದೆ
ಬೀದೀಲಿ ಬೆತ್ತಲೆ ಗ್ರಂಥ ಒರಗಿ ನಿಂತಿದೆ
ನಾಡೆಲ್ಲಾ ಕೆಟ್ಟು ಹೋಗಿದೆ ಕ್ಯಾಬರೆ ನೃತ್ಯಕ್ಕೆ ಇಲ್ಲಿ ಲೈಸೆನ್ಸ್ ಸಿಕ್ಕಿದೆ
ಪತ್ರಿಕೆ ಮಧ್ಯದ ಪೇಜೆ ಬೆತ್ತಲಾಗಿದೆ
ಅಯ್ಯಯ್ಯೋ ಇವರಿಗೆ ಇಲ್ಲಯ್ಯ ಸೆನ್ಸಾರು
ಆಳೋರೆ ಕೆಟ್ಟರೆ ಕೇಳೋರು ಇನ್ಯಾರು
ಹುಡುಕಾಡಿ ಅವರನ್ನೇ ಕೇಳೋಣ
ಯಾರು ಪೋಲಿ..  ಪೋಲಿ ಊರಲ್ಲಿ ನಾನೇನಾ
ಬೇರೆ ಎಲ್ಲಾ.. ಎಲ್ಲಾ ತುಂಬಾನೆ ಸಾಚಾನಾ

ಧಿಕ್ಕಾರ ಧಿಕ್ಕಾರ B.P. ಕ್ಲಾಸಿಗೆ ಧಿಕ್ಕಾರ
ಧಿಕ್ಕಾರ ಧಿಕ್ಕಾರ B.P. ಕ್ಲಾಸಿಗೆ ಧಿಕ್ಕಾರ

ಹೋರಾಟ ನಿಲ್ಲಬಾರದು ಕಾರಣ ನ್ಯಾಯವು ನಮಗೆ ಬೇಗ ಬೇಕಿದೆ
ಮುಂದಕ್ಕೆ ನಾವಿನ್ನು ತುಂಬಾ ಓದಬೇಕಿದೆ
ಕಾಲೇಜು ಮುಚ್ಚಬಾರದು ಕಾರಣ ಪಾಯದ ಕೆಳಗೆ ನಮ್ಮ ದುಡ್ಡಿದೆ
ಅದರಲ್ಲಿ ನನ್ನದು ತುಂಬಾ ದೊಡ್ಡ ಷೇರಿದೆ
ಕೇಳಲಿ ಕೇಳಲಿ ನಮ್ಮ ಕ್ಷಮೆಯ ಕೇಳಲಿ
ಏಳಲಿ ಕೇಳಲಿ ನಮ್ಮ ಕ್ಷಮೆಯ ಕೇಳಲಿ
ಸೋಲೆಂಬ ಮಾತಂತು ಗೊತ್ತಿಲ್ಲ

ನೀನೇ ಪೋಲಿ ಇನ್ನೂ ಅನುಮಾನನಾ
ನೀನೇ ಪೋಲಿ ಇನ್ನೂ ಅನುಮಾನನಾ

ಯಾವುದೋ ಯಾವುದೋ ಈ ರಾಗಮಾಲಿಕೆ
ಯಾವುದೋ ಯಾವುದೋ ಬೇಲೂರ ಬಾಲಿಕೆ
ಯಾವುದೋ ಯಾವುದೋ ಈ ರಾಗಮಾಲಿಕೆ
ಯಾವುದೋ ಯಾವುದೋ ಬೇಲೂರ ಬಾಲಿಕೆ

ಆಚಾರ್ಯ ದೇವರೆಂಬುವ ಸತ್ಯಕ್ಕೆ ಗೌರವನೀಡಿ ಮೂಢರಾಗದೆ
ಗುರುವಿನ ಪೂಜೆಯ ಮಾಡಿ ಅಂಧರಾಗದೆ
ಓಂಕಾರ ಹೇಳಿಕೊಡುವ ಗುರುವೆತಾನೆ ನಮ್ಮ ಕಣ್ಣುಗಳು
ಅವು ಕಂಬನಿ ಸುರಿಸಿದರೆ ಶಾಪಗಳು

ಧಿಕ್ಕಾರ ಧಿಕ್ಕಾರ B.P. ಕ್ಲಾಸಿಗೆ ಧಿಕ್ಕಾರ
ಧಿಕ್ಕಾರ ಧಿಕ್ಕಾರ ಧಿಕ್ಕಾರಕ್ಕೆ ಧಿಕ್ಕಾರ
ದುಡುಕದಿರಿ ಎಡವದಿರಿ ಕ್ಷಮೆಕೇಳಿ

ಯಾರು ಪೋಲಿ..  ಪೋಲಿ ಊರಲ್ಲಿ ನಾನೇನಾ
ಬೇರೆ ಎಲ್ಲಾ.. ಎಲ್ಲಾ ತುಂಬಾನೆ ಸಾಚಾನಾ
ಭೂತಗಾಜು.. ಗಾಜು  ತನ್ನಿರಿ ಹಾಕೋಣ
ಸಾಚಾ ಯಾರು.. ಯಾರು ಪತ್ತೆಯ ಮಾಡೋಣ
ಹುಡುಕಾಡಿ ಅವನನ್ನೇ ಕೇಳೋಣ

ಮಾಮ ಮಾಮ ಚಂದಮಾಮ

ಚಿತ್ರ: ಬೆಳ್ಳಿಕಾಲುಂಗುರ (1992)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ  & ಕೆ. ಎಸ್. ಚಿತ್ರ

ಮಾಮ ಮಾಮ ಚಂದಮಾಮ
ಚಂದವಳ್ಳಿ ಹೆಣ್ಣುನಾನು ಚಂದವೇನು ನಿನಗೆ ನಾನು
ರಾಮ ರಾಮ ಗೊಂಬೆ ರಾಮ
ಕೋಡಿಬೀಳೋ ಕೆರೆಯಹಾಗೆ ಬಂದುಸೇರೋ ಕಣಿವೆಯಾಗೆ

ಮೋಟುದ್ದ ಜೆಡೆಯನು ನಾ ಈಟುದ್ದ ಹೆಣೆದೆನು
ಸ್ಯಾವಂತಿ ಮುಡಿದೆನು ಚಿನ್ನ
ಹಾಲ್ಗೆನ್ನೆಗರಿಷಿಣ ಕೈಗೋರಂಟಿ ಬರೆಸಿ ನಾ
ಹಾಲ್ಕಾಸಿಕಾದೆ ನಾ ನಿನ್ನ
ರಾತ್ರಿ ಪೂರಾ ಕಾದು ಕಾದು ಯವ್ವಿ ಯವ್ವಿಯೊ
ಕಾಣ್ತವಲ್ಲೋ ನಾಲ್ಕುಐದು ಯವ್ವಿ ಯವ್ವಿಯೊ
ಯಾಕೆ ಕುಂತೆ ಏನು ಚಿಂತೆ ಪ್ರೀತಿಸೊ ನನ್ನ

ಮಾಮ ಮಾಮ ಚಂದಮಾಮ
ಬಂದನೋಡು ಗೊಂಬೆರಾಮ ತಂದನೋಡು ಪ್ರೀತಿಪ್ರೇಮ
ಮಾಮ ಮಾಮ ಚಂದಮಾಮ
ಬಂದನೋಡು ಗೊಂಬೆರಾಮ ತಂದನೋಡು ಪ್ರೀತಿಪ್ರೇಮ

ಮೈಯ್ಯಾಗೆ ಕಚಗುಳಿ ಇದೇನಪ್ಪೊ ಚಳವಳಿ
ನಿಂದೇನ ಬಳುವಳಿ ಗೆಳೆಯ
ಕಾಲಿಂದ ಬಿರ ಬಿರ ತಲೆಗೇರೈತಿ ಹರ ಹರ
ಈ ಮತ್ತು ನರ ನರ ಗೆಳತಿ
ಮಿಂಚು ಮಿಂಚು ಕಣ್ಣಿನಂಚು ಯವ್ವಿ ಯವ್ವಿಯೊ
ಮೈಯ್ಯಸೋಕಿ ಕಾದ ಹೆಂಚು ಯವ್ವಿ ಯವ್ವಿಯೊ
ಸೂತ್ರವಲ್ಲ ತಂತ್ರವಲ್ಲ ಪ್ರೇಮದ ಮಂತ್ರ

ಮಾಮ ಮಾಮ ಚಂದಮಾಮ
ಚಂದವಳ್ಳಿ ಹೆಣ್ಣುನಾನು ಚಂದವೇನು ನಿನಗೆ ನಾನು

ಕಾಡೆಲ್ಲಾ ಝಗ ಮಗ ಸಿಂಗಾರ ನಮ್ಮದುಗೆಗ
ಮೈಯೆಲ್ಲಾ ವಾಲಗ ಊದು
ಇದೇನಯ್ಯ ಗಗಮಗ ಇವೆಲ್ಲಾನೂ ಹೊಸಗಿಗ
ಏನೇನೊ ಸೋಜಿಗ ಜಾದೂ
ಈಟು ಹೊತ್ತು ಎಲ್ಲಿ ಇತ್ತು ಯವ್ವಿ ಯವ್ವಿಯೊ
ಹೊತ್ತು ಗೊತ್ತು ಜೋಡಿಮುತ್ತು ಯವ್ವಿ ಯವ್ವಿಯೊ
ಹಾಲಿನಂತ ಹುಣ್ಣಿಮೇಲಿ ನಿಯುವ ಬಾರಾ

ಮಾಮ ಮಾಮ ಚಂದಮಾಮ
ಬಂದನೋಡು ಗೊಂಬೆರಾಮ ತಂದನೋಡು ಪ್ರೀತಿಪ್ರೇಮ
ಮಾಮ ಮಾಮ ಚಂದಮಾಮ
ಚಂದವಳ್ಳಿ ಹೆಣ್ಣುನಾನು ಚಂದವೇನು ನಿನಗೆ ನಾನು
...

ಬಿದ್ದೆ ಬಿದ್ದೆ ಬಾತ್ ರೂಮಲ್ಲಿ ಲವ್ವಲ್ಲಿ ಬಿದ್ದೆ ಲವ್ವಲ್ಲಿ ಬಿದ್ದೆ

ಚಿತ್ರ: ಗಡಿಬಿಡಿ ಗಂಡ (1993)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ & ಕೆ.ಎಸ್.ಚಿತ್ರ

ಬಿದ್ದೆ ಬಿದ್ದೆ ಬಾತ್ ರೂಮಲ್ಲಿ ಲವ್ವಲ್ಲಿ ಬಿದ್ದೆ ಲವ್ವಲ್ಲಿ ಬಿದ್ದೆ
ಗೆದ್ದೆ ಗೆದ್ದೆ ಬಾಯ್ ಫ್ರೆಂಡನ್ನ ಕಿಸ್ಸಲ್ಲಿ ಗೆದ್ದೆ ಕಿಸ್ಸಲ್ಲಿ ಗೆದ್ದೆ
ಬಾಯೆಲ್ಲಾ ಒದ್ದೆ ಮೈಯೆಲ್ಲಾ ಮುದ್ದೆ ಇನ್ನೆಲ್ಲಿ ನಿದ್ದೆ ಮಾವ
ಬಿದ್ದೆ ಬಿದ್ದೆ ಬಾತ್ ರೂಮಲ್ಲಿ ಲವ್ವಲ್ಲಿ ಬಿದ್ದೆ ಲವ್ವಲ್ಲಿ ಬಿದ್ದೆ

ತಾ ಕಾಮಕೆ ದಿಗ್ಬಂಧನ ಈ ಪ್ರಣಯ ರಾತ್ರಿಗೆ
ತಾ ಬಳ್ಳಿಗೆ ರೋಮಾಂಚನ ಈ ಮಧುರ ಮೈತ್ರಿಗೆ
ತಾ ಆಸೆಗೆ ಆಲಿಂಗನ ಈ ರಾಸಲೀಲೆಗೆ
ತಾ ಹೂವಲಿ ಭೂಕಂಪನ ಈ ವಿರಹಜ್ವಾಲೆಗೆ
ಈ ಹರೆಯದ ನರಕೊಳಲಲಿ ಇದೆ ಸರಿಗಮ ಹುಳ್ಳೆಗಳು
ಈ ಮದನನ ಕಿರುಬೆರಳಲಿ ನವಿರೇಳದೆ ಗುಳ್ಳೆಗಳು
ಲವ್ವು ಕಿಸ್ಸು ಸೇರುವಾಗ ಎದೇಲಿ ಸದ್ದೇ ಎದೇಲಿ ಸದ್ದೇ
ಬಾಯೆಲ್ಲಾ ಒದ್ದೆ ಮೈಯೆಲ್ಲಾ ಮುದ್ದೆ ಇನ್ನೆಲ್ಲಿ ನಿದ್ದೆ ಬೇಬಿ
ಬಿದ್ದೆ ಬಿದ್ದೆ ಬಾತ್ ರೂಮಲ್ಲಿ ಲವ್ವಲ್ಲಿ ಬಿದ್ದೆ ಲವ್ವಲ್ಲಿ ಬಿದ್ದೆ

ಈ ಸೀರೆಗೂ ಈ ನೀರೆಗೂ ಅದು ಏಕೆ ಸ್ನೇಹವೋ
ಈ ನೀರಿಗೂ ಈ ನಡುಕಕೂ ಅದು ಏಕೆ ಮೋಹವೋ
ಈ ಹರೆಯಕೂ ಈ ಪ್ರಣಯಕೂ ಅದು ಏನು ನಂಟಿದೆ
ಈ ಮೈಯ್ಯಿಗೂ ಈ ಮನಸಿಗೂ ಅದು ಏನು ಅಂಟಿದೆ
ಹೊರ ಬೆವರಿಗೂ ಒಳ ಬಯಕೆಗೂ ಇದೆ ಮಿಥುನದ ಹುಸಿಕದನ
ಹೊರ ಕಂಪಿಗೂ ಒಳ ಬೆಂಕಿಗೂ ಬಿಗಿ ಅಪ್ಪುಗೆ ಉಪಶಮನ
ಲವ್ವು ಕಿಸ್ಸು ಸೇರುವಾಗ ಎದೇಲಿ ಸದ್ದೇ ಎದೇಲಿ ಸದ್ದೇ
ಬಾಯೆಲ್ಲಾ ಒದ್ದೆ ಮೈಯೆಲ್ಲಾ ಮುದ್ದೆ ಇನ್ನೆಲ್ಲಿ ನಿದ್ದೆ ಬೇಬಿ
ಬಿದ್ದೆ ಬಿದ್ದೆ ಬಾತ್ ರೂಮಲ್ಲಿ ಲವ್ವಲ್ಲಿ ಬಿದ್ದೆ ಲವ್ವಲ್ಲಿ ಬಿದ್ದೆ
ಗೆದ್ದೆ ಗೆದ್ದೆ ಬಾಯ್ ಫ್ರೆಂಡನ್ನ ಕಿಸ್ಸಲ್ಲಿ ಗೆದ್ದೆ ಕಿಸ್ಸಲ್ಲಿ ಗೆದ್ದೆ
ಬಾಯೆಲ್ಲಾ ಒದ್ದೆ ಮೈಯೆಲ್ಲಾ ಮುದ್ದೆ ಇನ್ನೆಲ್ಲಿ ನಿದ್ದೆ ಬೇಬಿ
ಬಿದ್ದೆ ಬಿದ್ದೆ ಬಾತ್ ರೂಮಲ್ಲಿ ಲವ್ವಲ್ಲಿ ಬಿದ್ದೆ ಲವ್ವಲ್ಲಿ ಬಿದ್ದೆ

ಮುದ್ದಾಡೆಂದಿದೆ ಮಲ್ಲಿಗೆ ಹೂ

ಚಿತ್ರ: ಗಡಿಬಿಡಿ ಗಂಡ (1993)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ & ಕೆ.ಎಸ್.ಚಿತ್ರ

ಮುದ್ದಾಡೆಂದಿದೆ ಮಲ್ಲಿಗೆ ಹೂ
ಮನಸೀ ಎಂದಿದೆ ಸಂಪಿಗೆ ಹೂ
ಮಲ್ಲಿಗೆಯಾ ಮೊದಲು ಸಂಪಿಗೆಯಾ
ಸಂಪಿಗೆಯಾ ಮೊದಲು ಮಲ್ಲಿಗೆಯಾ
ಮುದ್ದಾಡೆಂದಿದೆ ಮಲ್ಲಿಗೆ ಹೂ
ಮನಸೀ ಎಂದಿದೆ ಸಂಪಿಗೆ ಹೂ
ಇಡಬೇಕೋ ಮನಸು ಕೊಡಬೇಕೋ
ಕೊಡಬೇಕೋ ಮನಸು ಇಡಬೇಕೋ

ಮುಡಿಯಲಿ ಮಲ್ಲಿಗೆಯ ಮುಡಿದವಳ
ಮೊದಲು ಮುಡಿಯಬೇಕು
ಮಡದಿಗೆ ಪ್ರತಿದಿನವೂ ಮೊದಲಿರುಳಿರಬೇಕು
ಮನಸಿನ ಮಧುವಿನ ಮಹಲೊಳಗೆ
ಮದನ ಮಣಿಯಬೇಕು
ಸುರತಿಯ ಪರಮಾನ ಇತಮಿತವಿರಬೇಕು
ವಿರಹಬಾಧೆ ದಹಿಸುವಾಗ ಬಾಲಬೋಧೆ ಏಕೆ
ಪ್ರಣಯ ನದಿಯೆ ತುಳುಕುವಾಗ ಮದನ ಮಳೆಯು ಬೇಕೇ
ಹಿಡಿದುಕೊ ಮೆಲ್ಲಗೆ ತಡೆದುಕೋ ಮಲ್ಲಿಗೆ
ಹರೆಯ ನೆರೆಯ ತಡೆಯೊ ಇನಿಯ

ಮುದ್ದಾಡೆಂದಿದೆ ಮಲ್ಲಿಗೆ ಹೂ
ಮನಸೀ ಎಂದಿದೆ ಸಂಪಿಗೆ ಹೂ
ಮಲ್ಲಿಗೆಯಾ ಮೊದಲು ಸಂಪಿಗೆಯಾ
ಸಂಪಿಗೆಯಾ ಮೊದಲು ಮಲ್ಲಿಗೆಯಾ
ಮುದ್ದಾಡೆಂದಿದೆ ಮಲ್ಲಿಗೆ ಹೂ
ಮನಸೀ ಎಂದಿದೆ ಸಂಪಿಗೆ ಹೂ
ಇಡಬೇಕೋ ಮನಸು ಕೊಡಬೇಕೋ
ಕೊಡಬೇಕೋ ಮನಸು ಇಡಬೇಕೋ

ಘಮ ಘಮ ಸಂಪಿಗೆಯ ಸುಮತಿಯನು ಕೆಣಕಿ ಕಾಯಿಸದಿರು
ಕುಸುಮದ ಎದೆಯೊಳಗೆ ಪ್ರಳಯವ ತಾರದಿರು
ಹಿಡಿಯಲಿ ಹಿಡಿಯುವ ನಡುವಿನಲಿ ಬಳುಕಿ ಬೇಯಿಸದಿರು
ತುಂಬಿದ ನಿಷೆಯೊಳಗೆ ಚಂದ್ರನ ಕೂಗದಿರು
ಎದೆಯ ಸೆರಗ ಮೋಡದಲ್ಲಿ ನೀನೆ ಚಂದ್ರನೀಗ
ಹೃದಯ ಮೇರುಗಿರಿಗಳಲ್ಲಿ ಕರಗಬೇಕೇ ಈಗ
ಬಳಸಿಕೊ ಕಂಪಿಗೆ ಸಹಿಸಿಕೋ ಸಂಪಿಗೆ
ಹರೆಯ ಹೊರೆಯ ಇಳಿಸೋ ಇನಿಯ

ಮುದ್ದಾಡೆಂದಿದೆ ಮಲ್ಲಿಗೆ ಹೂ
ಮನಸೀ ಎಂದಿದೆ ಸಂಪಿಗೆ ಹೂ
ಮಲ್ಲಿಗೆಯಾ ಮೊದಲು ಸಂಪಿಗೆಯಾ
ಸಂಪಿಗೆಯಾ ಮೊದಲು ಮಲ್ಲಿಗೆಯಾ
ಮುದ್ದಾಡೆಂದಿದೆ ಮಲ್ಲಿಗೆ ಹೂ
ಮನಸೀ ಎಂದಿದೆ ಸಂಪಿಗೆ ಹೂ
ಇಡಬೇಕೋ ಮನಸು ಕೊಡಬೇಕೋ
ಕೊಡಬೇಕೋ ಮನಸು ಇಡಬೇಕೋ

ಚೋರ ಚೋರ ಚೋರ ಬಂದ

ಚಿತ್ರ: ಗೋಪಿಕೃಷ್ಣ (1992)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಮನು & ಕೆ.ಎಸ್.ಚಿತ್ರ

ಚೋರಿ..  ಚೋರಿ.. ಚೋರಿ..  ಚೋರಿ..
ಚೋರಿ ಚೋರಿ ಚಿತ್ತ ಚೋರಿ
ಚೋರಿ ಚೋರಿ ಚಿತ್ತ ಚೋರಿ
ಚೋರ ಚೋರ ಚೋರ ಬಂದ
ಚೋರಿ ಚೋರಿ ಚೋರಿ ಎಂದ
ಬಾಯಿಗೆ ಬಾಯಿಂದ ಬೀಗ ಇಟ್ಟ
ಭಂಡಾರ ಕದಿಯುವ ಭೀತಿ ಇಟ್ಟ
ಚೋರ ಚೋರ ಚೋರ ಚಿತ್ತ ಚೋರ
ಚೋರ ಚೋರ ಚೋರ ಬಂದ
ಚೋರಿ ಚೋರಿ ಚೋರಿ ಎಂದ
ಬಾಯಿಗೆ ಬಾಯಿಂದ ಬೀಗ ಇಟ್ಟ
ಭಂಡಾರ ಕದಿಯುವ ಭೀತಿ ಇಟ್ಟ
ಚೋರಿ ಚೋರಿ ಚೋರಿ ಚಿತ್ತ ಚೋರಿ

ಆ ಅಂದ್ರು ಊ ಅಂದ್ರು ಎದ್ದಾರು ಮನೆಯೋರು
ಸದ್ದಿಲ್ಲದೇ ಹಾಡು ಶ್ ಶ್ ಶ್ ಶ್
ಸದ್ದಿಲ್ಲದೇ ನೋಡು ಶ್ ಶ್ ಶ್ ಶ್
ಕಚಗುಳಿ ಬಳಬಳಿ ಒಳಗೊಳಗೆ ಕೊಡಬೇಡ
ಕರಕೌಶಲ್ಯ ಸಾಕು ಶ್ ಶ್ ಶ್ ಶ್
ಬರೀ ಚಾಪಲ್ಯಸಾಕು ಶ್ ಶ್ ಶ್ ಶ್
ಶ್ ಶ್ ಶ್ ಶ್ ಶ್ ಶ್ ನವರತ್ನ ನೀನೀಗ ಈ ಇರುಳಲ್ಲಿ
ಶ್ ಶ್ ಶ್ ಶ್ ಶ್ ಶ್ ಮಣಿದೀಪ ನೀನಾದೆ ಈ ನಗುವಲ್ಲಿ
ಚೋರ ಚೋರ ಚೋರ ಬಂದ
ಚೋರಿ ಚೋರಿ ಚೋರಿ ಎಂದ
ಬಾಯಿಗೆ ಬಾಯಿಂದ ಬೀಗ ಇಟ್ಟ
ಭಂಡಾರ ಕದಿಯುವ ಭೀತಿ ಇಟ್ಟ
ಚೋರ ಚೋರ ಚೋರ ಚಿತ್ತ ಚೋರ

ಸ ರಿ ಗ ಮ ಪ..ಪ ದ..ದ ನಿ..ನಿ ಸ..ಸ ಪ..ಪ ದ..ದ ನಿ..ನಿ ಸ..ಸ
ಟಕ ಟಕ ಗಡಿಯಾರ ಳಕ ಳಕ ಹನಿನೀರ
ತಾಳಕ್ಕೆ ಕಿವಿಕೊಟ್ರೆ ಸುಂ ಸುಂ ಸುಂ ಸುಂ
ಮೇಳಕ್ಕೆ ಮನವಿಟ್ರೆ ಸುಂ ಸುಂ ಸುಂ ಸುಂ
ಮೇಲೆಲ್ಲೂ ಸದ್ದಿಲ್ಲ ಸದ್ದೆಲ್ಲಾ ಒಳಗಡೆ
ನರನಾಡಿ ನುಡಿಕೇಳು ಡುಂ ಡುಂ ಡುಂ ಡುಂ
ಎದೆಗೂಡ ನಡೆಕೇಳು ಡುಂ ಡುಂ ಡುಂ ಡುಂ
ಶ್ ಶ್ ಶ್ ಶ್ ಶ್ ಶ್ ಮಾತಲ್ಲಿ ಮೈಯ್ಯನ್ನು ಮರೆಸೋ ಜಾಣ
ಶ್ ಶ್ ಶ್ ಶ್ ಶ್ ಶ್ ಮತ್ತಲ್ಲಿ ತೆಗಿಬೇಡ ನನ್ನ ಪ್ರಾಣ
ಚೋರ ಚೋರ ಚೋರ ಬಂದ
ಚೋರಿ ಚೋರಿ ಚೋರಿ ಎಂದ
ಬಾಯಿಗೆ ಬಾಯಿಂದ ಬೀಗ ಇಟ್ಟ
ಭಂಡಾರ ಕದಿಯುವ ಭೀತಿ ಇಟ್ಟ
ಚೋರಿ ಚೋರಿ ಚೋರಿ ಚಿತ್ತ ಚೋರಿ
ಚೋರ ಚೋರ ಚೋರ ಬಂದ
ಚೋರಿ ಚೋರಿ ಚೋರಿ ಎಂದ
ಬಾಯಿಗೆ ಬಾಯಿಂದ ಬೀಗ ಇಟ್ಟ
ಭಂಡಾರ ಕದಿಯುವ ಭೀತಿ ಇಟ್ಟ
ಚೋರ ಚೋರ ಚೋರ ಚಿತ್ತ ಚೋರ

ಆ ಸೂರ್ಯನ್ನ ಸುತ್ತೋದು

ಚಿತ್ರ: ಪೋಲಿಹುಡುಗ (1989)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ & ವಾಣಿ ಜಯರಾಮ್

ಆ ಸೂರ್ಯನ್ನ ಸುತ್ತೋದು ಈ..  ಭೂಮಿಕಣೋ
ಈ ಭೂಮಿಯ ಸುತ್ತೋದು ಈ..  ಪ್ರೀತಿಕಣೋ
ಈ ಪ್ರೀತಿಯ ಎಂದೆಂದೂ ಸುತ್ತೋದು ಓ.. ನಾವುಕಣೋ
ಪ್ರೀತಿ ಸುತ್ತ ನಾವು ಪ್ರೀತಿಸುತ್ತ ನಾವು ಬದುಕೋಣ
ಆ ಸೂರ್ಯನ್ನ ಸುತ್ತೋದು ಈ..  ಭೂಮಿಕಣೋ

ಈ ಕಣ್ಣಿನ ಆ ವೇದನೆ ಹೇಮಂತದ ಆಲಾಪನೆ
ಕೆಣಕಿದೆ ಕಲಕಿದೆ ನನ್ನ ಭಾವನೆ
ಈ ರೂಪದ ಆಸ್ವಾದನೆ ಋತುಮಾನದ ಆರಾಧನೆ
ತುಂಬಿದೆ ನನ್ನೆದೆ ನೂರು ಕಲ್ಪನೆ
ಅಗೋಚರ ಪ್ರೇಮವು ಈ ದಿನ ನಿಂತಿದೆ ನನ್ನೆದುರು
ಆ ಸೂರ್ಯನ್ನ ಸುತ್ತೋದು ಈ..  ಭೂಮಿಕಣೋ

ನೀನಿಲ್ಲದ ಈ ಜೀವನ ಗೋವಿಲ್ಲದ ಬೃಂದಾವನ
ನಡೆಸು ಬಾ ನುಡಿಸು ಬಾ ಜೀವವಾಗಿ ನೀ
ಹೀಗಿದ್ದರೆ ಹಾಗೆನ್ನುವ ಹಾಗಿದ್ದರೆ ಹೀಗೆನ್ನುವ
ಲೋಕದ ಮಾತಿಗೆ ಶೂಲವಾಗೊ ನೀ
ಅಗೋಚರ ಪ್ರೇಮವು ಈ ದಿನ ಬಂದಿದೆ ನಮ್ಮೆದುರು

ಆ ಸೂರ್ಯನ್ನ ಸುತ್ತೋದು ಈ..  ಭೂಮಿಕಣೋ
ಈ ಭೂಮಿಯ ಸುತ್ತೋದು ಈ..  ಪ್ರೀತಿಕಣೋ
ಈ ಪ್ರೀತಿಯ ಎಂದೆಂದೂ ಸುತ್ತೋದು ಓ.. ನಾವುಕಣೋ
ಪ್ರೀತಿ ಸುತ್ತ ನಾವು ಪ್ರೀತಿಸುತ್ತ ನಾವು ಬದುಕೋಣ

ನಾದ ನಾದ ಪ್ರೇಮದ ನಾದ

ಚಿತ್ರ: ಅಂಡಮಾನ್ (1998)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ & ಕೆ.ಎಸ್.ಚಿತ್ರ

ನಾದ ನಾದ ಪ್ರೇಮದ ನಾದ
ನಾದ ನಾದ ಪ್ರೇಮದ ನಾದ
ಜೀವದ ವೀಣಾ ತಂತಿಯಲಿ
ಸಾಗರದ ಸಂಗಮದ ಯೌವ್ವನದ ಸಂಭ್ರಮದ
ತನನನ ತನುವಲಿ
ನಾದ ನಾದ ಪ್ರೇಮದ ನಾದ

ಕಡಲ ಸೇರೋ ನದಿಗೆ ದಾರಿ ತೋರಿದವರು ಯಾರು
ಪುಷ್ಪರಾಗ ರತಿಗೆ ಹಾಡು ಕಲಿಸಿದವರು ಯಾರು
ಪ್ರಣಯ ಭಾಷೆಯ ಅರಿತುಕೊಳ್ಳುವ ಕಣ್ಣಿಗ್ಯಾರು ಗುರು.. ಪ್ರೀತಿ ಅರಿತವರು
ನಾದ ನಾದ ಪ್ರೇಮದ ನಾದ
ಜೀವದ ವೀಣಾ ತಂತಿಯಲಿ
ಸಾಗರದ ಸಂಗಮದ ಯೌವ್ವನದ ಸಂಭ್ರಮದ
ತನನನ ತನುವಲಿ
ನಾದ ನಾದ ಪ್ರೇಮದ ನಾದ

ಪ್ರಣಯ ಗಾಳಿಬೀಸಿ ಆಸೆಗಣ್ಣು ತೆರೆದು
ನಿದಿರೆ ಭಂಗವಾಗಿ ಬಯಕೆ ಲಜ್ಜೆತೊರೆದು
ತನ್ನನ್ನರಿಯದೇ ಕುಸುಮಸೇರುವ ದುಂಬಿಗಳ ಪಾಡು.. ನಮ್ಮ ಈ ಹಾಡು
ನಾದ ನಾದ ಪ್ರೇಮದ ನಾದ
ಜೀವದ ವೀಣಾ ತಂತಿಯಲಿ
ಸಾಗರದ ಸಂಗಮದ ಯೌವ್ವನದ ಸಂಭ್ರಮದ
ತನನನ ತನುವಲಿ
ನಾದ ನಾದ ಪ್ರೇಮದ ನಾದ

ಕೋಟಿ ರಾತ್ರಿ ಬರಲಿ ಮೊದಲ ರಾತ್ರಿ ಮಧುರ
ನೆನಪಿನಾಳದಲ್ಲಿ ಮಧುರ ಮೈತ್ರಿ ಅಮರ
ಪ್ರಥಮ ಚುಂಬನ ಪ್ರಣಯ ಕಂಪನ ಬಂದ ಈ ಇರುಳು.. ಬಾಳ ಜೇನಿರುಳು
ನಾದ ನಾದ ಪ್ರೇಮದ ನಾದ
ಜೀವದ ವೀಣಾ ತಂತಿಯಲಿ
ಸಾಗರದ ಸಂಗಮದ ಯೌವ್ವನದ ಸಂಭ್ರಮದ
ತನನನ ತನುವಲಿ
ನಾದ ನಾದ ಪ್ರೇಮದ ನಾದ

ಧಮ್ಮರೆ ಧಮ್ಮಮ್ಮ ನಾನ್ ಡಿಸ್ಕೊರುಕ್ಕಮ್ಮ

ಚಿತ್ರ: ಮಿಸ್ಟರ್ ರಾಜಾ (1987)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಜಯಪಾಲ್ & ಮಂಜುಳಾ ಗುರುರಾಜ್

.....
ಅರೆ ಧಮ್ಮರೆ ಧಮ್ಮಮ್ಮ ನಾನ್ ಡಿಸ್ಕೊರುಕ್ಕಮ್ಮ
ಅರೆ ಧಮ್ಮರೆ ಧಮ್ಮಮ್ಮ ನಾನ್ ಡಿಸ್ಕೊರುಕ್ಕಮ್ಮ
ತಕ ತಕಧಿಮಿ ತಕ ತಕಧಿಮಿ ಕುಣಿಸೋ ಪ್ರಿಯತಮ
ತಕ ತಕಧಿಮಿ ತಕ ತಕಧಿಮಿ ಕುಣಿಸೋ ಪ್ರಿಯತಮ
ಅರೆ ಡಿಸ್ಕೊರುಕ್ಕಮ್ಮ ನಿನ್ನ ಹೆಜ್ಜೆ ಇಕ್ಕಮ್ಮ
ಅರೆ ಡಿಸ್ಕೊರುಕ್ಕಮ್ಮ ನಿನ್ನ ಹೆಜ್ಜೆ ಇಕ್ಕಮ್ಮ
ತಕ ತಕಧಿಮಿ ತಕ ತಕಧಿಮಿ ನನ್ನ ಕುಣಿಸಮ್ಮ
ತಕ ತಕಧಿಮಿ ತಕ ತಕಧಿಮಿ ನನ್ನ ಕುಣಿಸಮ್ಮ
ಬಾರೆನ್ನ ಸರದಾರ ಈ ವಯಸು ಬಲುಭಾರ
ಈ ಭಾರದ ವ್ಯವಹಾರ ತಿಳಿದಿದ್ದವನೇ ಶೂರ
ಅರೆ ಡಿಸ್ಕೊರುಕ್ಕಮ್ಮ ನಿನ್ನ ಹೆಜ್ಜೆ ಇಕ್ಕಮ್ಮ
ತಕ ತಕಧಿಮಿ ತಕ ತಕಧಿಮಿ ಕುಣಿಸೋ ಪ್ರಿಯತಮ

ಹೆಜ್ಜೆ ಇಟ್ಟಿದರೆ ಇಟ್ಟಿಟ್ಟು ನೋಡಿದರೆ
ಯೌವ್ವನವೆಲ್ಲಾ ಹಿಂದಿಂದೇನೆ ಬರುವುದು ನೋಡಿಲ್ಲಿ
ಮತ್ತೆ ಮುಟ್ಟಿದರೆ ಮುತ್ತಿಟ್ಟು ನೋಡಿದರೆ
ಮೈಮನವೆಲ್ಲಾ ಸಕ್ಕರೆಯಂತೆ ಕರಗುವುದೇಕಿಲ್ಲಿ
ಜೀವನವೆಂದರೇನು ಬಾ ಏಳು ದಿನದ ವಾರ
ಯೌವ್ವನವೆಂದರೇನು ಅದರಲ್ಲಿ ಭಾನುವಾರ
ಜೀವನವೆಂದರೇನು ಬಾ ಏಳು ದಿನದ ವಾರ
ಯೌವ್ವನವೆಂದರೇನು ಅದರಲ್ಲಿ ಭಾನುವಾರ
ಬಾರೆನ್ನ ಸರದಾರ ಈ ವಯಸು ಬಲುಭಾರ
ಈ ಭಾರದ ವ್ಯವಹಾರ ತಿಳಿದಿದ್ದವನೇ ಶೂರ
ಅರೆ ಧಮ್ಮರೆ ಧಮ್ಮಮ್ಮ ನಾನ್ ಡಿಸ್ಕೊರುಕ್ಕಮ್ಮ
ಅರೆ ಡಿಸ್ಕೊರುಕ್ಕಮ್ಮ ನಿನ್ನ ಹೆಜ್ಜೆ ಇಕ್ಕಮ್ಮ

ಜುಂ ತರ ಜುಂ ತರ ಜುಂ ತರ ಜುಂ
ಜುಂ ತರ ಜುಂ ತರ ಜುಂ ತರ ಜುಂ

ಕುಣಿಸು ಎಂದರೆ ನೀ ಗುಣಿಸೋದ್ಯಾಕಮ್ಮೊ
ಗುಂಡಾಕಿದ್ದರು ಟೈಟಾಗಿದ್ದರು ಬುದ್ಧಿಕೆಟ್ಟಿಲ್ಲ
ಕುಡಿಸು ಎಂದರೆ ನೀ ಗುಡಿಸೋದ್ಯಾಕಮ್ಮೋ
ಸಂಸಾರಸ್ಥರ ರೂಲ್ಸುಗಳನ್ನ ನಾನು ಮೀರಲ್ಲ
ದೂರದ ಬೆಟ್ಟವೆಲ್ಲ ಕಾಣೋದು ನುಣ್ಣಗೇನೆ
ಹತ್ತಿರ ಹೋದರೆಲ್ಲ ಬರೀ ಕಲ್ಲು ಮುಳ್ಳುತಾನೇ
ದೂರದ ಬೆಟ್ಟವೆಲ್ಲ ಕಾಣೋದು ನುಣ್ಣಗೇನೆ
ಹತ್ತಿರ ಹೋದರೆಲ್ಲ ಬರೀ ಕಲ್ಲು ಮುಳ್ಳುತಾನೇ
ನೀ ಏನೇ ಹೇಳಮ್ಮ ಆ ಕೆಲಸ ಬ್ಯಾಡಮ್ಮ
ಬರೀ ಕುಣಿತ ಇದ್ದರೆ ನನಗಷ್ಟೇ ಸಾಕಮ್ಮ
ಅರೆ ಧಮ್ಮರೆ ಧಮ್ಮಮ್ಮ ನಾನ್ ಡಿಸ್ಕೊರುಕ್ಕಮ್ಮ
ಅರೆ ಡಿಸ್ಕೊರುಕ್ಕಮ್ಮ ನಿನ್ನ ಹೆಜ್ಜೆ ಇಕ್ಕಮ್ಮ
ತಕ ತಕಧಿಮಿ ತಕ ತಕಧಿಮಿ ಕುಣಿಸೋ ಪ್ರಿಯತಮ
ತಕ ತಕಧಿಮಿ ತಕ ತಕಧಿಮಿ ನನ್ನ ಕುಣಿಸಮ್ಮ
ಬಾರೆನ್ನ ಸರದಾರ ಈ ವಯಸು ಬಲುಭಾರ
ಈ ಭಾರದ ವ್ಯವಹಾರ ತಿಳಿದಿದ್ದವನೇ ಶೂರ
ಅರೆ ಧಮ್ಮರೆ ಧಮ್ಮಮ್ಮ ಬಾ ಡಿಸ್ಕೊರುಕ್ಕಮ್ಮ
ತಕ ತಕಧಿಮಿ ತಕ ತಕಧಿಮಿ ಕುಣಿಸೋ ಪ್ರಿಯತಮ
ತಕ ತಕಧಿಮಿ ತಕ ತಕಧಿಮಿ ನನ್ನ ಕುಣಿಸಮ್ಮ
ತಕ ತಕಧಿಮಿ ತಕ ತಕಧಿಮಿ ಕುಣಿಸೋ ಪ್ರಿಯತಮ

ಕಡಲಿಗೆ ಒಂದು ಕೊನೆಇದೆ ಸ್ನೇಹಕೆ ಎಲ್ಲಿದೆ

ಚಿತ್ರ: ಇಂದ್ರಜಿತ್ (1989)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ & ಚಂದ್ರಿಕಾ ಗುರುರಾಜ್

ಕಡಲಿಗೆ ಒಂದು ಕೊನೆಇದೆ ಸ್ನೇಹಕೆ ಎಲ್ಲಿದೆ
ಸಾವಿಗೂ ಒಂದು ಮಿತಿಇದೆ ಪ್ರೀತಿಗೆ ಎಲ್ಲಿದೆ
ಸ್ನೇಹ ಎಂಬ ಹೂಬನದಲ್ಲಿ ಬಾ ಓಲಾಡುವ
ಪ್ರೀತಿ ಎಂಬ ಬಾನಂಚಲ್ಲಿ ಬಾ ತೇಲಾಡುವ
ನೋಡಲ್ಲಿ ಆ ಬೆಳ್ಳಿಸೂರ್ಯನು ಹರಸುತ ಜೊತೆಯಲಿ ಬಂದನು
ನೋಡಲ್ಲಿ ಆ ಬೆಳ್ಳಿಸೂರ್ಯನು ಹರಸುತ ಜೊತೆಯಲಿ ಬಂದನು
ಕಡಲಿಗೆ ಒಂದು ಕೊನೆಇದೆ ಸ್ನೇಹಕೆ ಎಲ್ಲಿದೆ
ಸಾವಿಗೂ ಒಂದು ಮಿತಿಇದೆ ಪ್ರೀತಿಗೆ ಎಲ್ಲಿದೆ

ಓ.. ಹೊ ಮುಂಜಾವಿನ ಹೂ ಮೇಲಿನ ಆ ಮಂಜಿನ ನಗು ಇಲ್ಲಿದೆ
ಆ.. ಹ ಅನುರಾಗದ ಆ ಮೋದದ ಆನಂದದ ಹಾಡಿಲ್ಲಿದೆ
ಈ ಕಣ್ಣ ಕೊಳದ ಹಂಸವೆ ನೀನು ಹೃದಯ ಮಿಡಿಯುವೆ
ಈ ನನ್ನ ಎದೆಯ ತುಡಿತವೆ ನೀನು ನನ್ನ ನುಡಿಸುವೆ
ಬಾ ಹೃದಯದೊಲವೇ ಹೊಂಬಿಸಿಲ ಚಲುವೆ ನೀನಿರಲು ಎಲ್ಲಾ ಗೆಲುವೇ ಗೆಲುವೇ
ಈ ಬಾಳಿನ ಮುಗಿಯದ ಪಯಣದ ನಡುವೆಯೂ
ಲ ಲ ಲ ಲ ಲ ಲ ಲ ನೋಡಲ್ಲಿ ಆ ಬೆಳ್ಳಿಸೂರ್ಯನು ಹರಸುತ ಜೊತೆಯಲಿ ಬಂದನು
ಕಡಲಿಗೆ ಒಂದು ಕೊನೆಇದೆ ಸ್ನೇಹಕೆ ಎಲ್ಲಿದೆ
ಸಾವಿಗೂ ಒಂದು ಮಿತಿಇದೆ ಪ್ರೀತಿಗೆ ಎಲ್ಲಿದೆ

ಓ.. ಹೊ ಇತಿಹಾಸದ ಛಲಗಾರರ ಬೆನ್ ಹಿಂದೆಯೇ ಹೆಣ್ಣೊಂದಿದೆ
ಈ ಹೋರಾಟದ ಬಲವೆಲ್ಲವೂ ಈ ನಿನ್ನಯ ಒಲವೆಲ್ಲಿದೆ
ಈ ಉಸಿರಮೇಲೆ ನಿನ್ನಯ ಹೆಸರು ನಾನು ಬರೆಯುವೆ
ಈ ಹಸಿರ ನೆನಪು ಮರೆಯದೆ ನಾನು ಹೀಗೆ ಉಳಿಸುವೆ
ಬಾ ಹೃದಯದೊಲವೇ ಹೊಂಬಿಸಿಲ ಚಲುವೆ ನೀನಿರಲು ಎಲ್ಲಾ ಗೆಲುವೇ ಗೆಲುವೇ
ಈ ಬಾಳಿನ ಮುಗಿಯದ ಪಯಣದ ನಡುವೆಯೂ
ಲ ಲ ಲ ಲ ಲ ಲ ಲ ನೋಡಲ್ಲಿ ಆ ಬೆಳ್ಳಿಸೂರ್ಯನು ಹರಸುತ ಜೊತೆಯಲಿ ಬಂದನು
ಕಡಲಿಗೆ ಒಂದು ಕೊನೆಇದೆ ಸ್ನೇಹಕೆ ಎಲ್ಲಿದೆ
ಸಾವಿಗೂ ಒಂದು ಮಿತಿಇದೆ ಪ್ರೀತಿಗೆ ಎಲ್ಲಿದೆ
ಸ್ನೇಹ ಎಂಬ ಹೂಬನದಲ್ಲಿ ಬಾ ಓಲಾಡುವ
ಪ್ರೀತಿ ಎಂಬ ಬಾನಂಚಲ್ಲಿ ಬಾ ತೇಲಾಡುವ
ನೋಡಲ್ಲಿ ಆ ಬೆಳ್ಳಿಸೂರ್ಯನು ಹರಸುತ ಜೊತೆಯಲಿ ಬಂದನು
....

ಬೆಳ್ಳಿರಥದಲಿ ಸೂರ್ಯತಂದ ಕಿರಣ

ಚಿತ್ರ: ಇಂದ್ರಜಿತ್ (1989)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ & ಬಿ.ಆರ್. ಛಾಯಾ

ಬೆಳ್ಳಿರಥದಲಿ ಸೂರ್ಯತಂದ ಕಿರಣ...
ಬೆಳ್ಳಿರಥದಲಿ ಸೂರ್ಯತಂದ ಕಿರಣ
ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ
ಬೆಳ್ಳಿರಥದಲಿ ಸೂರ್ಯತಂದ ಕಿರಣ
ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ

ಮೇಘಶ್ಯಾಮನ ಮುರುಳಿಲೋಲನ ಪ್ರೀತಿಯೊಂದು ಕವನ
ನುಡಿಸು ಕೊಳಲನು ನಾ ಬರುವೆ ಹಿಡಿದು ಶ್ರುತಿಯನ್ನ
ಹರಿಸು ಹೊನಲನು ಸೇರುತಲಿ ಪ್ರೀತಿ ಕಡಲನ್ನ
ಹವಳ ಮುತ್ತನು ಕಡಲ ಅಲೆಯನು ನಿನಗೆ ತರುವೆ ನಾನು
ಸೇರಿ ನಿನ್ನನು ಮುತ್ತಲ್ಲೇ ಮನೆಯ ಕಟ್ಟುವೆನು
ಮುಗಿಲ ಮಿಂಚನೆ ತಂದಿರಿಸಿ ದೀಪ ಹಚ್ಚುವೆನು
ಕರಗಿದೆ ನಿನ್ನ ಒಲವಿಗೆ ಹೂ ಹಾಸುವೆ ನಿನ್ನ ಹಾದಿಗೆ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ
ಬೆಳ್ಳಿರಥದಲಿ ಸೂರ್ಯತಂದ ಕಿರಣ
ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸಗಾನ

ಹಗಲು ಇರುಳಲಿ ಬಿಸಿಲು ಮಳೆಯಲಿ ಹೊಳೆವ ನಿನ್ನ ನಯನ
ಪ್ರೀತಿ ಹರಿಸಿದೆ ತುಂಬೆನ್ನ ತಾಯಿಮಡಿಲನ್ನ
ಜನುಮ ಜನುಮಕೂ ನಾ ಬಂದು ಸೇರುವೆನು ನಿನ್ನ
ಭೂಮಿಬಿರಿದರೂ ಪ್ರಳಯವಾದರೂ ಇರಲಿ ಎಂದೂ ಮಿಲನ
ಭೂಮಿ ಇಲ್ಲವೇ ನಾ ಬರುವೆ ಬಾನಿಗೆ ಓ ಚಿನ್ನ
ಬಾನು ಇಲ್ಲವೇ ನಿನ್ನುಸಿರ ತಾಳಲು ಬಲುಚನ್ನ
ಅರಳಿದೆ ಹೂ ಮಲ್ಲಿಗೆ ಉಸಿರಾಡಿದೆ ನಿನಗಾಗಿಯೇ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ
ಬೆಳ್ಳಿರಥದಲಿ ಸೂರ್ಯತಂದ ಕಿರಣ
ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ

ಎಲೆ ಹೊಂಬಿಸಿಲೆ ಎಲೆ ತಂಬೆಲರೆ

ಚಿತ್ರ: ಹಾಲುಂಡ ತವರು (1994)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ & ಕೆ.ಎಸ್.ಚಿತ್ರ

ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥಾ ಜೋಡಿನಾ ಎಲ್ಲಾರ ಕಂಡಿರಾ
ಎಲೆ ನೀರಿನಲೆ ಎಲೆ ಹಸಿರಸಿರೆ
ಇಂಥಾ ಜೋಡಿನಾ ಎಂದಾರ ಕಂಡಿರಾ
ಓ.. ಕುಹೂ ಇಂಚರವೆ ಸುಖೀ ಸಂಕುಲವೆ
ಇಂಥಾ ಹಿಂಗಾರಿನ ಮುಂಗಾರಿನ ಮಿಲನ ಕಂಡಿರಾ
ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥಾ ಜೋಡಿನಾ ಎಲ್ಲಾರ ಕಂಡಿರಾ

ನನ್ನವಳು ಚಂದನ ಹೆಂಗರುಳ ಹೂಮನ
ಋತುವೇ ಸುರಿಸು ಇವಳಿಗೆ ಹೂಮಳೆ
ಎದೆಯಲಿ ಆದರ ತುಂಬಿರುವ ಸಾಗರ
ನನ್ನ ದೊರೆಯ ಹೃದಯನಿವಾಸಿ ನಾ
ಅರೆರೆ ನುಡಿದೆ ಕವನ
ನುಡಿಸೋ ಕವಿಗೆ ನಮನ
ಹೋ.. ಮಹಾ ಮೇಘಗಳೇ ಅಸ್ತುದೈವಗಳೇ
ಇಂಥಾ ಆಂತರ್ಯದ ಸೌಂದರ್ಯದ ಸೊಬಗು ಕಂಡಿರಾ
ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥಾ ಜೋಡಿನಾ ಎಲ್ಲಾರ ಕಂಡಿರಾ

ತನನನಾ ತಾನನಾ.. ತಂದನನಾ ತಾನನಾ
ಹುಣ್ಣಿಮೆಯ ಆಗಸ ಬೆಳಕಿನ ಪಾಯಸ
ಸುರಿಸೇ ಸವಿದೆ ಸತಿಯೇ ನೀ ಸವಿ
ನಿಮ್ಮ ತುಟಿ ತೋರಿಸಿ ನನ್ನ ತುಟಿ ಸೇರಿಸಿ
ನೀವು ಸವಿದ ಸವಿಗೂ ಇದು ಸವಿ
ಅರೆರೆ ನುಡಿದೆ ಪ್ರಾಸ
ಕವಿಯ ಜೊತೆಗೆ ವಾಸ
ಹೋ.. ಚುಕ್ಕಿ ತಾರೆಗಳೆ ಸುಖೀ ಮೇಳಗಳೆ
ಇಂಥಾ ಸಂಸಾರದ ಸವಿಯೂಟದ ಸವಿಯ ಕಂಡಿರಾ
ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥಾ ಜೋಡಿನಾ ಎಲ್ಲಾರ ಕಂಡಿರಾ
ಎಲೆ ನೀರಿನಲೆ ಎಲೆ ಹಸಿರಸಿರೆ
ಇಂಥಾ ಜೋಡಿನಾ ಎಂದಾರ ಕಂಡಿರಾ
ಓ.. ಕುಹೂ ಇಂಚರವೆ ಸುಖೀ ಸಂಕುಲವೆ
ಇಂಥಾ ಹಿಂಗಾರಿನ ಮುಂಗಾರಿನ ಮಿಲನ ಕಂಡಿರಾ
ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥಾ ಜೋಡಿನಾ ಎಲ್ಲಾರ ಕಂಡಿರಾ
ಎಲೆ ......

ಅಂದವೋ ಅಂದವು ಕನ್ನಡನಾಡು

ಚಿತ್ರ: ಮಲ್ಲಿಗೆ ಹೂವೆ (1992)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಡಾII ಕೆ. ಜೆ. ಯೇಸುದಾಸ್

ಅಂದವೋ ಅಂದವು ಕನ್ನಡನಾಡು, ನನ್ನಗೂಡು ಅಲ್ಲಿದೆ ನೋಡು
ಚಂದವೋ ಚಂದವು ನನ್ನಯಗೂಡು, ನನ್ನಹಾಡು ಅಲ್ಲಿದೆ ನೋಡು
ಕಾವೇರಿ ಹರಿವಳು ನನ್ನ ಮನೆಯ ಅಂಗಳದಲ್ಲಿ
ಕಸ್ತೂರಿ ಮೆರೆವಳು ನನ್ನ ಮಡದಿ ಮಲ್ಲಿಗೆಯಲ್ಲಿ II ಅಂದವೋ II

ನನ್ನ ಮನೆಯ ಮುಂದೆ ಸಹ್ಯಾದ್ರಿಗಿರಿಯ ಹಿಂದೆ
ದಿನವು ನೂರು ಶಶಿಯು ಹುಟ್ಟಿಬಂದರೂ
ನನ್ನರತಿಯ ಮೊಗವ ಮರೆಮಾಚದಂಥ ನಗುವ
ಅವನೆಂದೂ ತಾರಲಿಲ್ಲವೇ ಪ್ರಿಯೆ .. ಒ.. ಹೋ
ನನ್ನ ಕಣ್ಣಮುಂದೆ ಮರಗಿಡದ ಮಂದೆ ಮಂದೆ
ಕೋಟಿ ಪಕ್ಷಿ ಕೂಗು ಕೇಳಿ ಬಂದರೂ
ನನ್ನ ಚಲುವೆ ಹಾಡ ಅನುರಾಗದಿಂದ ನೋಡೋ
ಆ ರಾಗ ನೋಟ ಕಾಣದೇ ಪ್ರಿಯೆ .. ಎ.. ಹೇ
ಸಹ್ಯಾದ್ರಿಕಾಯ್ವಳು ನನ್ನ ಮನೆಯ ಕರುಣೆಯಮೇಲೆ
ಆಗುಂಬೆ ನಗುವಳು ನನ್ನ ಮಡದಿನೊಸಲಿನ ಮೇಲೆ II ಅಂದವೋ II

ನಾಳೆಗಿಂತ ಇಂದೇ ಸಿಹಿಯಾದ ದಿವಸವಂತೆ
ಇಂದುನಾಳೆ ಸಿಹಿಯು ಸೇರೊದೆಂಬುದು
ಅಂತರಾಳವೆಂಬ ನೇತ್ರಾವತಿಯ ತುಂಬಾ
ಈ ಸ್ನೇಹ ಜಲದ ಸೆಳೆಯು ನಿಲ್ಲದೋ .. ಎ.. ಹೇ
ಉಸಿರು ಎಂಬ ಹಕ್ಕಿ ಎದೆಗೂಡಿನಲ್ಲಿ ಸಿಕ್ಕಿ
ಕುಹೂ ಕುಹೂ ಎಂದರೇನೇ ಜೀವನ
ಬೆಚ್ಚಗಿರುವ ಮನೆಯ ತನ್ನ ಇಚ್ಛೆ ಅರಿವ ಸತಿಯ
ಸವಿಪ್ರೇಮ ದೊರೆತ ಬಾಳು ಧನ್ಯವೋ .. ಎ.. ಹೇ
ಈ ನಾಡು ನುಡಿಯಿದು ನನಗೆ ಎಂದೂ ಕೋಟಿ ರೂಪಾಯಿ
ಈ ಬಾಳ ಗುಡಿಯಲಿ ನಿಜದಮುಂದೆ ನಾನು ಸಿಪಾಯಿ II ಅಂದವೋ II

ಚಂದನ ಚಂದನದಿಂದ ಕೊರೆದ ಬೊಂಬೆಯ ಅಂದ ಚಂದ

ಚಿತ್ರ: ಮಿಡಿದ ಹೃದಯಗಳು (1993)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ & ಕೆ.ಎಸ್.ಚಿತ್ರ

ಚಂದನ ಚಂದನದಿಂದ ಕೊರೆದ ಬೊಂಬೆಯ ಅಂದ ಚಂದ
ಘಮ ಘಮ ಬೊಂಬೆ ಹಿಡಿದರೆ
ಸರಿಗಮ ಬೊಂಬೆ ನುಡಿದರೆ
ಚಂದನ ಚಂದನದಿಂದ ಕೊರೆದ ಬೊಂಬೆಯ ಅಂದ ಚಂದ
ಘಮ ಘಮ ಬೊಂಬೆ ಹಿಡಿದರೆ
ಸರಿಗಮ ಬೊಂಬೆ ನುಡಿದರೆ

ತುಂಬಿರುವ ತುಂಗೆ ನೀನು ಸೌಂದರ್ಯ ವನದ ಜೇನು
ಬಳುಕಿದರೆ ನೀ ಮುಳುಗುವೆನು ನಾ
ರಸವಂತ ಚಿತ್ರಕಾರ ನನ್ನಪ್ರೇಮ ಸೂತ್ರಧಾರ
ತೀಡಿದರೆ ನೀ ಮೂಡುವೆನು ನಾ
ಮಾತಾಡಬಲ್ಲದೀ ಬೇಲೂರ ಬಾಲಿಕೆ
ಸಿಹಿಯಾದ ಕಾಣಿಕೆ ಕೊಡಬಲ್ಲ ಮದನಿಕೆ II ಚಂದನ II

ಕಲ್ಪನೆಯ ಕನ್ಯೆ ನಾನು ಕಂಗೊಳಿಸೋ ಕವಿಯು ನೀನು
ಬಯಸಿದರೆ ನೀ ಬಳಸುವೆನು ನಾ
ಕರ್ಪೂರ ಅಲ್ಲ ನೀನು ಕರಗೋಕೆ ಬಲ್ಲೆಯೇನು
ಕರಗಿದರೆ ನೀ ಉರಿಸುವೆನು ನಾ
ಅಸಾಮಾನ್ಯ ಶೂರನೇ ಸುಕುಮಾರಿ ಚೋರನೇ
ಅಪರೂಪ ಭಂಗಿಯೇ ರತಿದೇವಿ ತಂಗಿಯೇ II ಚಂದನ II

ದೇವಲೋಕ ಪ್ರೇಮಲೋಕ ನನ್ನ ಮನೆಈಗ

ಚಿತ್ರ: ಮಿಡಿದ ಹೃದಯಗಳು (1993)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ & ಕೆ.ಎಸ್.ಚಿತ್ರ

ದೇವಲೋಕ ಪ್ರೇಮಲೋಕ ನನ್ನ ಮನೆಈಗ
ಇಲ್ಲಿ ನಾನು, ನನ್ನಗಂಡ, ನನ್ನಮಗುವೇ
ಪ್ರತೀ ರಾತ್ರಿ, ಪ್ರತೀ ಹಗಲು, ಬರೀ ನಗುವೆ
ದೇವಲೋಕ ಪ್ರೇಮಲೋಕ ನನ್ನ ಮನೆಈಗ
ಇಲ್ಲಿ ನಾನು, ನನ್ನಹೆಂಡತಿ, ನನ್ನಮಗುವೇ
ಪ್ರತೀ ರಾತ್ರಿ, ಪ್ರತೀ ಹಗಲು, ಬರೀ ನಗುವೆ

ಕನಸಿನಮಾಲೆ ಕಟ್ಟಿದಮೇಲೆ ನನಸುಮಾಡಿದೆ
ಮನಸುನೀಡಿದೆ ಹೃದಯ ಮಿಡಿಸಿದೆ
ಬಡತನ ನಾನು ಹೊಸತನ ನೀನು ನನ್ನ ವರಿಸಿದೆ
ಜೀವ ಬೆರೆಸಿದೆ ನೋವ ಮರೆಸಿದೆ
ಕಾವೇರಿ ನನಗಕ್ಕ ನಾ ಕಪಿಲ
ನಿನ್ನಿಂದ ಪಡಕೊಂಡೆ ನಾ ಸಕಲ
ಈ ಜನುಮದಲಿ ಮರುಜನುಮದಲಿ ನನ್ನಾಳುವ ಪತಿನೀನೇ

ವರುಷಗಳೆಲ್ಲಾ ನಿಮಿಷಗಳಂತೆ ಉರುಳಿಹೋದವು
ನಿನ್ನ ಜೊತೆಯಲಿ ಪ್ರೇಮಕಥೆಯಲಿ
ಬಯಕೆಗಳೆಲ್ಲಾ ಹೊಸಚಿಗುರಂತೆ ಮರಳಿಬಂದವು
ನಿನ್ನ ನಗುವಲಿ ಪ್ರೇಮವರದಲಿ
ಇಲ್ಲಿ ಕೋಪ ಇಲ್ಲಿ ತಾಪ ಅಪರೂಪ
ಅತೀ ಸರಳ ಅತೀ ವಿರಳ ನಿನ್ನರೂಪ
ಈ ಜನುಮದಲಿ ಮರುಜನುಮದಲಿ ನನ್ನಾಳುವ ದೊರೆನೀನೇ

ಅರಿಷಿಣ ಕುಂಕುಮ ಭಾಗ್ಯದ ಸಂಗಮ

ಚಿತ್ರ: ತಾಯಿ ಇಲ್ಲದ ತವರು (1995)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಡಾll ರಾಜ್ ಕುಮಾರ್

ಅರಿಷಿಣ ಕುಂಕುಮ ಭಾಗ್ಯದ ಸಂಗಮ
ಅರಿಷಿಣ ಕುಂಕುಮ ಪುಣ್ಯದ ಸಂಗಮ
ಸಾವಿನಾಚೆಯು ನಾರಿ ತಾನು,
ಸಾವಿನಾಚೆಯು ನಾರಿ ತಾನು
ಬಯಸುವ ಮಹಾ ಸಂಬ್ರಮ II ಅರಿಷಿಣ II

ಹಣೆಯ ಕುಂಕುಮವು ಹರನ ಹಣೆಗಣ್ಣು
ಅರಿಷಿಣದ ದಾರ ನಮ್ಮ ಆಚಾರ
ಹರಸಿ ಬಳೆಯಲಿ ಬಾಳ ನಗಿಸಿ
ವರಿಸಿ ಹೂವಲಿ ಮನವ ಸುಖಿಸಿ
ಜೀವ ಸವೆಸುವಳು II ಸಾವಿನಾಚೆಯು II

ಅರಿಷಿಣ ಕುಂಕುಮ ಭಾಗ್ಯದ ಸಂಗಮ
ಅರಿಷಿಣ ಕುಂಕುಮ ಸೌಭಾಗ್ಯದ ಸಂಗಮ

ಹಣೆಯ ಅಳಿಸಿದರೆ ಅಚಲವಾಗುವಳು
ತಾಳಿ ತೆಗೆಸಿದರೆ ತಾಳಿ ಬಾಳುವಳು
ಹಣೆಯ ಬರಹವ ಅಳಿಸಬಲ್ಲ ಶಕುತಿ ಇಲ್ಲದ ಜಗವನೆಲ್ಲ
ನಗುತ ನೋಡುವಳು II ಸಾವಿನಾಚೆಯು II

ಅರಿಷಿಣ ಕುಂಕುಮ ಭಾಗ್ಯದ ಸಂಗಮ
ಅರಿಷಿಣ ಕುಂಕುಮ ಪುಣ್ಯದ ಸಂಗಮ
ಸಾವಿನಾಚೆಯು ನಾರಿ ತಾನು,
ಸಾವಿನಾಚೆಯು ನಾರಿ ತಾನು
ಬಯಸುವ ಈ ಸಂಬ್ರಮ II ಅರಿಷಿಣ II

ನನ್ನವನು ನನ್ನವನು

ಚಿತ್ರ: ಚಿನ್ನ (1994)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಕೆ. ಎಸ್. ಚಿತ್ರ

ನನ್ನವನು ನನ್ನವನು
ನನ್ನವಳೇ ಎಂದವನು
ನನ್ನಬಿಟ್ಟು ಮರೆಯಾದನು
ಕಣ್ಣಿನಂತೆ ಎಂದವನು
ಕಣ್ಣೆದುರೇ ಇದ್ದವನು
ಕಣ್ಣೆದುರೇ ದೂರಾದನು..
ಕಣ್ಣಿನಲಿ ನೀರಾದನು ll ನನ್ನವನು ll

ನವರಂಗಿನ ನವರಂಗಿನ
ನವರಂಗಿನ ನನ್ನ ಜೀವನ ಬಿಳಿಯಾಯಿತು
ಬಳೆ ಹೋಯಿತು, ಬರಿದಾಯಿತು
ತಾಳಿ ಹೋದಮೇಲೆ ತಾಳಿ ಬಾಳಲೇ..
ಒಡಲಲ್ಲಿ ಒಲವಿರಿಸಿ ಒಗಟಾಗಿ ಹೋದ ll ನನ್ನವನು ll

ಬೆಳದಿಂಗಳೇ ತಂಗಾಳಿಯೇ
ನಿನ್ನೊಡಲಲಿ ನಿನ್ನುಸಿರಲಿ ಅವನಿರುವನೇ
ಅವನಿರುವನೇ ಅವಿತಿರುವನೇ
ಕರುಣೆ ತೋರಿ ನನ್ನ-ಅವನ ಸೇರಿಸಿ
ಅವನಿರದ ತಂಬೆಳಕು ಚಿತೆ ಏರೋ ಬೆಂಕಿ ll ನನ್ನವನು ll

ಉಸಿರ ಮೇಲೆ ಏದುಸಿರು ಅರೆ ಇದು ಏನಿದೇನಿದು

ಚಿತ್ರ: ಅಭಿಮನ್ಯು (1990)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್. ಪಿ. ಬಿ. & ಮಂಜುಳ ಗುರುರಾಜ್

ಉಸಿರ ಮೇಲೆ ಏದುಸಿರು ಅರೆ ಇದು ಏನಿದೇನಿದು
ನಿನ್ನ ಮುಖವು ನೂರಾರು ಅರೆ ಇದು ಯಾಕಿದ್ಯಾಕಿದು
ಪ್ರೀತಿಲಿ ಬಿದ್ದೆ ಪೋಲೀಸು, ನನ್ನೆದೆ ನಿನ್ನ ಆಫೀಸು II
ಎದೆಯ ಒಳಗೆ ಪಿಸುಮಾತು ಅರೆ ಕೇಳು ಅದೇನದು
ಹೊರಗೆ ಬರದೇ ನಿಂತೋಯ್ತು ಅರೆ ಹೇಳು ಇದ್ಯಾಕಿದು
ಮಾತೆಲ್ಲಾ ಯಾಕೆ ಪೋಲೀಸು ನಿನ್ನೆದೆ ನನ್ನ ಪ್ಯಾಲೇಸು II

ಅರೆ ರೆ ರೆ ಏನಿದು ನಿನಗೆ ಹಣೆಮೇಲೆ ಬೆವರಹನಿ ಸಾಲು
ಅರೆ ರೆ ರೆ ತಿಳಿಯದೇ ನಿನಗೆ ಇದು ಪ್ರೇಮದಕ್ಷತೆಯ ಕಾಳು
ಆ.. ಇನ್ನೂ ನಿನ್ನ ಸೋಕೇ ಇಲ್ಲ ಕೆಂಪಾಗೋಯ್ತು ಕೆನ್ನೆ-ಗಲ್ಲ
ಮೈಯ್ಯಲ್ಲಿರೋ ಪ್ರಾಣ ಎಲ್ಲಾ ಕೆನ್ನೆ ಮೇಲೆ ಬಂತೊ ನಲ್ಲ
ಪ್ರೀತಿ ಎಂದರೇ ಏನು..
ಹಾಲು ಸಕ್ಕರೆ ಜೇನು..
ಮದುವೆಯ ಊಟಕೆ ಪ್ರೀತಿಯೇ ಸಿಹಿ ನಂಚಿಕೆ
ನಮ್ಮನೆ ಊಟಕೆ ಕರೆಯಲು ನಾಚಿಕೆ II ಉಸಿರಮೇಲೆ II

ಅರೆ ರೆ ರೆ ಏನಿದು ನಿನಗೆ ಏಕಾಂತದಲ್ಲೂ ಹೊಸ ಚಿಂತೆ
ಉಡುಗೊರೆ ನೀಡಲು ನಿನಗೆ ನನ್ನಲ್ಲಿ ಏನೂ ಇಲ್ಲಂತೆ
ಆ.. ಮೋಡಿ ಮಾಡೋ ಜೋಡಿ ಕಣ್ಣು ಮುಚ್ಚಿ ಕೊಡೆ ತೊಂಡೆಹಣ್ಣು
ನೀನೆ ನನ್ನ ಕಣ್ಣು ಜಾಣ ಕೇಳೋ ನನ್ನ ಆರೂ ಪ್ರಾಣ
ಅಚ್ಛೆ ಮಲ್ಲಿಗೆ ಹೆಣ್ಣಿದು..
ಅಚ್ಚು ಬೆಲ್ಲದ ಗಂಡಿದು..
ಹುಡುಗಿ ನೀ ಹೂ ಗೊಂಚಲು ಜೇನಿನ ಸಿಹಿ ಬಟ್ಟಲು
ಬಡಿಸುವೆ ಬಾ ತಿನ್ನಲು ಬಿಗಿಯುವೆ ಕೈ ತೊಟ್ಟಿಲು

ಉಸಿರ ಮೇಲೆ ಏದುಸಿರು ಅರೆ ಇದು ಏನಿದೇನಿದು
ಎದೆಯ ಒಳಗೆ ಪಿಸುಮಾತು ಅರೆ ಕೇಳು ಅದೇನದು
ಹೆಂಡತಿಗಿದು ಈ ಕೇಸು ಲಾಕಪ್ಪಿನಲ್ಲಿ ಪೋಲೀಸು
ಹಾಸಿಗೆ ಈಗ ಆಫೀಸು ನೀಡಯ್ಯ ಒಂದು ಕೈಗೂಸು

ಮುತ್ತೇ ಪ್ರಥಮ ಅದುವೇ ಜಗದ ನಿಯಮ

ಚಿತ್ರ: ಯುಗಪುರುಷ (1989)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್. ಪಿ. ಬಿ & ವಾಣಿ ಜಯರಾಮ್

ಮುತ್ತೇ ಪ್ರಥಮ ಅದುವೇ ಜಗದ ನಿಯಮ
ಮದುವೆ ಪ್ರಥಮ ಅದುವೇ ಜನರ ನಿಯಮ
ಆ ಸೂರ್ಯ ಕಿರಣಗಳು ಹಸಿರು ಭೂಮಿಯನು ಚುಂಬಿಸದೇ
ಸಾಗರದ ಅಲೆಗಳಿವು ಮರಳ ತೀರವನು ಚುಂಬಿಸದೇ
ಝೇಂಕರಿಸೊ ದುಂಬಿಗಳು ನಗುವ ಹೂಗಳನು ಮುದ್ಧಿಸದೇ II ಮುತ್ತೇ II

ತಣ್ಣನೆ ಗಾಳಿ ಇದು ಬೀಸುತಿದೆ, ನಿನ್ನಯ ಮೈಸಿರಿಗೆ ಮುತ್ತಿಟ್ಟಿದೆ
ಸೋಕದ ನಿನ್ನಯ ತುಟಿಗಳ ನಾ ಸೋಕಬಾರದೇ.. ಸೋಕಬಾರದೇ
ಸಂಜೆಯ ವೇಳೆ ಇದು ಜಾರುತಿದೆ, ನಿನ್ನಯ ಸಂಯಮವು ಮೀರುತಿದೆ
ಮುತ್ತಿನ ಹಾರದಿ ನೀಡುವೆ ನಾ ತಾಳಬಾರದೇ.. ತಾಳಬಾರದೇ II ಮುತ್ತೇ II

ಸಾವಿರ ಆಸೆಗಳು ಕಣ್ಣಲ್ಲಿದೆ, ತೀರುವ ದಾರಿಗಳು ಮುತ್ತಲ್ಲಿದೆ
ಹಾರುವ ಮನಸಿಗೆ ಚುಂಬನವಾ ನೀಡಬಾರದೇ, ನೀಡಬಾರದೇ
ದೂರದ ಸ್ನೇಹದಲಿ ಪ್ರೇಮವಿದೆ, ನೋಡುವ ನೋಟದಲಿ ಮೋಹವಿದೆ
ಸೇರಲು ಕಾಯುವ ವಿರಹದಲೇ ಆಸೆ ತೀರದೇ, ಆಸೆ ತೀರದೇ II ಮುತ್ತೇ II

ಕುಕ್ಕುಕ್ಕುಕ್ಕೂ ಕೋಗಿಲೆ ವಸಂತಕಾಲ ಬಂದಿದೆ

ಚಿತ್ರ: ತಾಯಿ ಇಲ್ಲದ ತವರು (1995)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಕೆ. ಎಸ್. ಚಿತ್ರ

ಕುಕ್ಕುಕ್ಕುಕ್ಕೂ ಕೋಗಿಲೆ ವಸಂತಕಾಲ ಬಂದಿದೆ
ಕುಕ್ಕುಕ್ಕುಕ್ಕೂ ಕೋಗಿಲೆ ಮದುವೆಮಾಲೆ ತಂದಿದೆ
ಪ್ರೇಮದ ಮನೆಯ ತೋರಣವಾಗೋ ಮಾಮರದೆಲೆ ನಾನು IIಕುಕ್ಕುಕ್ಕುಕ್ಕೂII

ಓ ನನ್ನ ಮಂದಾರ ಕೇಳೆ ಹೂವಿಗೆ ಕಲ್ಯಾಣ ನಾಳೆ
ಪ್ರೇಮದ ಪಲ್ಲಂಗದಲ್ಲಿ ದುಂಬಿಯ ಪಾಲಾಗೋವೇಳೆ
ನನ್ನ ಕೂಡಿರು ನನ್ನ ಕೂಡಿರು ನಿನ್ನ ಜೇನನು ಸಾಲ ತಂದಿರು

ಓ ಪ್ರೇಮವೇ ಕವನ ನಾ ಪ್ರೇಮದ ಗಮನ
ಪ್ರೇಮದ ಮನೆಯ ತೋರಣವಾಗೋ ಮಾಮರದೆಲೆ ನಾನು IIಕುಕ್ಕುಕ್ಕುಕ್ಕೂII

ತಂದನನ ತನನನ ತನನ ತನನ ತನನ ತನನ ತನನ ತನ II

ಓ ನನ್ನ ತಂಗಾಳಿ ಕೇಳೆ ಹೂಡೂವೆ ಸಂಸಾರ ನಾಳೆ
ಜೀವನ ಕಾವೇರಿ ತುಂಬಾ ಪ್ರೀತಿಯು ಹಾಲಾಗೋ ವೇಳೆ
ನನ್ನ ತೇಲಿಸು ನನ್ನ ತೇಲಿಸು ಪ್ರೇಮತೀರಕೆ ನನ್ನ ಸೇರಿಸು

ಓ ಪ್ರೇಮವೇ ನಮನ ನೀ ನಗಿಸಿದೆ ಸುಮನ
ಪ್ರೇಮದ ಮನೆಯ ತೋರಣವಾಗೋ ಮಾಮರದೆಲೆ ನಾನು IIಕುಕ್ಕುಕ್ಕುಕ್ಕೂII

ಮೂಡಣದರಮನೆ ಬಾಗಿಲ ತೆರೆದನು ಬಾನಿನ ರವಿತೇಜ

ಚಿತ್ರ: ನವತಾರೆ (1991)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ

ಮೂಡಣದರಮನೆ ಬಾಗಿಲ ತೆರೆದನು ಬಾನಿನ ರವಿತೇಜ..
ಮೂಡಣದರಮನೆ ಬಾಗಿಲ ತೆರೆದನು ಬಾನಿನ ರವಿತೇಜ..
ಬೆಳಕಿನ ರಾಶಿ ಇದು ಬದುಕಿನ ಓಟವಿದು
ಬೆಳಕಿನ ರಾಶಿ ಇದು ಬದುಕಿನ ಓಟವಿದು
ಈ ಮರಗಳಿಗೆ ಮರದೊಳಗಾಗಿಳಿಗಳಿಗೆ
ಗಿಳಿಗಳ ಆ ಚಿಲಿಪಿಲಿಗೆ ಚೇತನವೀ ಶುಭಘಳಿಗೆ
ಸರಸರ ಮೂಡಣದರಮನೆ ಬಾಗಿಲ ತೆರೆದನು ಬಾನಿನ ರವಿತೇಜ
ಮೂಡಣದರಮನೆ ಬಾಗಿಲ ತೆರೆದನು ಬಾನಿನ ರವಿತೇಜ
ಬೆಳಕಿನ ರಾಶಿ ಇದು ಬದುಕಿನ ಓಟವಿದು
ಬೆಳಕಿನ ರಾಶಿ ಇದು ಬದುಕಿನ ಓಟವಿದು

ಒಂಟಿಕಾಲ ಮೇಲಿನ ಸೂರ್ಯಕಾಂತಿ ಹೂ ನರ್ತನ
ಮಾವು ಸೀಬೆಯು ಮೈಗೆ ಹಚ್ಚಿಕೊಂಡವು ಅರಿಷಿಣ
ತೆರೆದವು ಹಸಿರೆಲೆಗಳು ಮುತ್ತಿನಂಗಡಿ
ನಕ್ಕವು ಗಂಗಮ್ಮನ ರತ್ನ ಕೋಶವು
ಈ ಕವಿಗಳಿಗೆ ಕವಿಯೊಳಗೀ ಪದಗಳಿಗೆ
ಸವಿಯುವ ಜಾಣ್ಗಿವಿಗಳಿಗೆ ಚೇತನವೀ ಶುಭಘಳಿಗೆ
ಸರಸರ ಮೂಡಣದರಮನೆ ಬಾಗಿಲ ತೆರೆದನು ಬಾನಿನ ರವಿತೇಜ
ಮೂಡಣದರಮನೆ ಬಾಗಿಲ ತೆರೆದನು ಬಾನಿನ ರವಿತೇಜ
ಬೆಳಕಿನ ರಾಶಿ ಇದು ಬದುಕಿನ ಓಟವಿದು
ಬೆಳಕಿನ ರಾಶಿ ಇದು ಬದುಕಿನ ಓಟವಿದು

ಆ... ನೂರುಹಿಂಡು ಬಾನಾಡಿ ಬಾನ ತುಂಬ ಹಾರಾಡಿ
ವಂದನೆ ನಿನಗೆ ನೇಸರ ಎಂದವು ತೊರೆದು ಬೇಸರ
ಮೊಳಗಿತು ಗುಡಿಘಂಟೆಯ ವೇದಘೋಷವು
ಹರಸಿತು ಜಗವೆಲ್ಲವ ಸುಪ್ರಭಾತವು
ಈ ಜಗದೊಳಗೆ ಜಗದೊಳಗೀ ಜನಗಳಿಗೆ
ಜನಗಳ ಈ ನಡೆಗಳಿಗೆ ಚೇತನವೀ ಶುಭಘಳಿಗೆ
ಸರಸರ ಮೂಡಣದರಮನೆ ಬಾಗಿಲ ತೆರೆದನು ಬಾನಿನ ರವಿತೇಜ
ಮೂಡಣದರಮನೆ ಬಾಗಿಲ ತೆರೆದನು ಬಾನಿನ ರವಿತೇಜ
ಬೆಳಕಿನ ರಾಶಿ ಇದು ಬದುಕಿನ ಓಟವಿದು
ಬೆಳಕಿನ ರಾಶಿ ಇದು ಬದುಕಿನ ಓಟವಿದು

ಏನು ಹುಡುಗಿನೋ.. ಅ ಅ ಅ ಅಹ

ಚಿತ್ರ: ಮೇಘಮಾಲೆ (1994)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯನ: ಎಸ್. ಪಿ. ಬಿ & ಕೆ. ಎಸ್. ಚಿತ್ರ

ಓಂ ಪ್ರಥಃ ಓಂ ಪ್ರಥಃ ಓಂ ಪ್ರಥಃ ಓಂ
ಪ್ರೇಂ ಪ್ರಥಃ ಓಂ ಪ್ರಥಃ ಓಂ...

ಏನು ಹುಡುಗಿನೋ.. ಅ ಅ ಅ ಅಹ
ಪ್ರೀತಿ ಎಂದು ಹೇಳಿ ಮೊದಲ ಮುತ್ತು ತಂದಳು

ಓಂ ಪ್ರಥಃ ಓಂ ಪ್ರಥಃ ಓಂ ಪ್ರಥಃ ಓಂ
ಪ್ರೇಂ ಪ್ರಥಃ ಓಂ ಪ್ರಥಃ ಓಂ
ಓಂ ಪ್ರಥಃ ಓಂ ಪ್ರಥಃ ಓಂ ಪ್ರಥಃ ಓಂ
ಪ್ರೇಂ ಪ್ರಥಃ ಓಂ ಪ್ರಥಃ ಓಂ

ಏನು ಹುಡುಗನೋ.. ಅ ಅ ಅ ಅಹ
ಪ್ರೀತಿ ಎಂದು ಹೇಳಿ ಮೊದಲ ಮುತ್ತು ತಂದನು

ಓಂ ಪ್ರಥಃ ಓಂ ಪ್ರಥಃ  ಓಂ ಪ್ರಥಃ ಓಂ
ಪ್ರೇಂ ಪ್ರಥಃ ಓಂ ಪ್ರಥಃ ಓಂ
ಓಂ ಪ್ರಥಃ ಓಂ ಪ್ರಥಃ ಓಂ ಪ್ರಥಃ ಓಂ
ಪ್ರೇಂ ಪ್ರಥಃ ಓಂ ಪ್ರಥಃ ಓಂ

ಏಯ್! ಡು ಯು ಲವ್ ಮೀ
ಯಃ.. ಐ ಲವ್ ಯು

ಏನೂ ಕಾಣಿಸದು...
ಏನೂ ಕೇಳಿಸದು...
ಕಿವಿಯತುಂಬಾ ಚುಂಬನಾದ
ಭೂಮಿಮೇಲೆ ಇಲ್ಲಾ ಪಾದ
ನೋಡುವುದಂತೆ, ನೇರ ನೋಡುವುದಂತೆ
ಹೇಳಲು ಹೋಗಿ ಬಾಯಿ ಕೂಡುವುದಂತೆ
ಆಸೆಯಾಯಿತೆಂದು, ಸಿಹಿ ಜೇನಿನೂಟ ತಿಂದು
ರಾಣಿಜೇನ ಮಗಳು ನಾಚುತಾಳೆ ಇವಳು
ಏನು ಹುಡುಗಿನೋ.. ಅ ಅ ಅ ಅಹ
ಪ್ರೀತಿ ಎಂದು ಹೇಳಿ ಮೊದಲ ಮುತ್ತು ತಂದಳು

ಓಂ ಪ್ರಥಃ ಓಂ ಪ್ರಥಃ ಓಂ ಪ್ರಥಃ ಓಂ
ಪ್ರೇಂ ಪ್ರಥಃ ಓಂ ಪ್ರಥಃ ಓಂ
ಓಂ ಪ್ರಥಃ ಓಂ ಪ್ರಥಃ ಓಂ ಪ್ರಥಃ ಓಂ
ಪ್ರೇಂ ಪ್ರಥಃ ಓಂ ಪ್ರಥಃ ಓಂ

ಇಂದೇ ಪ್ರೇಮದಿನ...
ಇಂದೇ ಪರ್ವದಿನ...
ಎದೆಯ ತುಂಬಾ ಕುಂಭಮೇಳ
ತರುಣ ತಂದನಾನ ತಾಳ
ಮಂಥರವಿಲ್ಲ, ಯಾವ ಎತ್ತರವಿಲ್ಲ
ಇಬ್ಬರ ನಡುವೆ, ಈಗ ಅಂತರವಿಲ್ಲ
ಪ್ರೇಮದೆಲ್ಲಾ ಸಾಲು, ನಾ ಹೇಳಿಯಾದಮೇಲೂ
ಕಾಳಿದಾಸನಿವನು ಕಾಡುತಾನೆ ಇವನು
ಏನು ಹುಡುಗನೋ.. ಅ ಅ ಅ ಅಹ
ಪ್ರೀತಿ ಎಂದು ಹೇಳಿ ಮೊದಲ ಮುತ್ತು ತಂದನು

ಓಂ ಪ್ರಥಃ ಓಂ ಪ್ರಥಃ ಓಂ ಪ್ರಥಃ ಓಂ
ಪ್ರೇಂ ಪ್ರಥಃ ಓಂ ಪ್ರಥಃ ಓಂ
ಓಂ ಪ್ರಥಃ ಓಂ ಪ್ರಥಃ ಓಂ ಪ್ರಥಃ ಓಂ
ಪ್ರೇಂ ಪ್ರಥಃ ಓಂ ಪ್ರಥಃ ಓಂ

ಓ.. ಪುಟ್ಟನಂಜ ನೀನು ನಮ್ಮೂರ ಒಕ್ಕಲಂಜ

ಚಿತ್ರ: ಲಾಕಪ್ ಡೆತ್ (1994)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯನ: ಎಸ್. ಪಿ. ಬಿ & ಕೆ. ಎಸ್. ಚಿತ್ರ

ಓ.. ಪುಟ್ಟನಂಜ ನೀನು ನಮ್ಮೂರ ಒಕ್ಕಲಂಜ
ಓ.. ಪುಟ್ಟನಂಜಿ ನೀನು ನಮ್ಮೂರ ಪುಕ್ಕಲಂಜಿ
ಸುತ್ತಾಲು ಹೆಂಗಸರೇ ಗೊತ್ತಾಗಿ ಹಂಗಿಸರೆ
ಮುದ್ದಾಟ ಬಯಲಲ್ಲೇ
ಓ.. ಪುಟ್ಟನಂಜಿ, ಓ ಓ ಓ.. ಪುಕ್ಕಲಂಜಿ
ನಾನು ಸಂಜೆಗೆ ಕಾಯುತೀನಿ
ನಾನು ಮುಂಜಾನೆ ಕೂಗುತೀನಿ

ಓ.. ಪುಟ್ಟನಂಜಿ ನೀನು ನಮ್ಮೂರ ಪುಕ್ಕಲಂಜಿ
ಓ.. ಪುಟ್ಟನಂಜ ನೀನು ನಮ್ಮೂರ ಒಕ್ಕಲಂಜ

ತಾಳ್ ನಂಜಿ ತಾಳ್ ಓಡಬ್ಯಾಡ
ಮರೆಯೊಳಗೆ ಮುದ್ದುಮಾಡ
ಕೇಳ್ ನಂಜ ಕೇಳ್ ಕಾಡಬ್ಯಾಡ
ಬಿಸಿಲೊಳಗೆ ಬಿಸಿಬ್ಯಾಡ
ತಾಳ್ ನಂಜಿ ತಾಳ್ ಅಂಜಬ್ಯಾಡ
ಬಿಸಿಮೈಯ್ಯ ಕಾಸಬ್ಯಾಡ

ನಮ್ಮೂರು ನಿಯಮಗಳ ತವರು
ಪಂಚಾಯ್ತಿ ಬಾಯಿಗಳು ಜೋರು
ಗುಲ್ಲಾದರೇ ಗಡಿಪಾರು ಪಾರುಮಾಡು ಪಾರು
ಗುಟ್ಟೇನೈತೆ ನಾನು ನೀನು ಪ್ರೀತಿ ಮಾಡುತೀವಿ
ಬೀದಿಮೇಲೆ ಹಾಡಿ-ಕಾಡಿ ಕೆಟ್ಟೋರಾಗುತೀವಿ
ತಪ್ಪೇನೈತೆ ನಾಳೆ ನಾವು ಮದುವೆ ಆಗುತೀವಿ
ಮದುವೆಮಾತ್ರ ಬೀದಿಲಿದ್ರೆ ಊರುಗಲ್ಲಿ ಸೇರಿ

ಓ.. ಪುಟ್ಟನಂಜಿ ನೀನು ನಮ್ಮೂರ ಪುಕ್ಕಲಂಜಿ
ಓ.. ಪುಟ್ಟನಂಜ ನೀನು ನಮ್ಮೂರ ಒಕ್ಕಲಂಜ
ಎಲ್ಲಾರು ನಮ್ಮವರು ತುಂಟಾಟ ಮೆಚ್ಚುವರು ತಪ್ಪಾದ್ರು ತಿದ್ದುತ್ತಾರೆ
ಓ.. ಪುಟ್ಟನಂಜ ಓ ಓ ಓ.. ಒಕ್ಕಲಂಜ
ನಾಳೆ ಮುಂಜಾನೆ ಕೂಗುತೀನಿ
ಇಂದು ಸಂಜೇನೆ ಕಾಯುತೀನಿ

ಓ.. ಪುಟ್ಟನಂಜ ನೀನು ನಮ್ಮೂರ ಒಕ್ಕಲಂಜ
ಓ.. ಪುಟ್ಟನಂಜಿ ನೀನು ನಮ್ಮೂರ ಪುಕ್ಕಲಂಜಿ

ಏಯ್ ನಂಜಿ, ಈ ಮರ‌ದ್ಹಿಂದೆ ಮರೆಐತೆ ಬಾ ಬಾ
ಅಯ್ಯೋ! ಜಾಲಿ ಮರದಲ್ಲಿ ನೆರಳಾ, ಎಲ್ಲಾ ಕಾಣ್ತೈತೆ

ಕಾಡೋರ ಮೆಚ್ಚುತ್ತೀರಿ ನೀವು
ಹಂಗಾಗಿ ಹೆಚ್ಚುತ್ತೀವಿ ನಾವು
ಕಲ್ಲ್ ಹಾಕದೇ ಕೋಲ್ಎತ್ತದೇ ಹಾರತೈತ ಹಾವು
ಹಾಲು ಖೀರು ಹಾಕುತೀವಿ ಹಾವು ದೇವರಂತ
ಹಾವು ಹಾನಿ ಮಾಡದಂತೆ ಪ್ರೀತಿ ಪೂಜೆಯಂತ
ಬೆಂಕಿ ಹಾಕಿ ಹಾಡುತೀವಿ ಕಾಮ ಸಾಯಲಂತ
ಕಾಮ ಹೋಗಿ ಪ್ರೀತಿಯಾಗಿ ಜನ್ಮ ತಾಳಿತಂತ

ಓ.. ಪುಟ್ಟನಂಜ ನೀನು ನಮ್ಮೂರ ಒಕ್ಕಲಂಜ
ಓ.. ಪುಟ್ಟನಂಜಿ ನೀನು ನಮ್ಮೂರ ಪುಕ್ಕಲಂಜಿ
ಸುತ್ತಾಲು ಹೆಂಗಸರೇ ಗೊತ್ತಾಗಿ ಹಂಗಿಸರೆ
ಮುದ್ದಾಟ ಬಯಲಲ್ಲೇ
ಓ.. ಪುಟ್ಟನಂಜಿ, ಓ ಓ ಓ.. ಪುಕ್ಕಲಂಜಿ
ನಾನು ಸಂಜೆಗೆ ಕಾಯುತೀನಿ
ನಾನು ಮುಂಜಾನೆ ಕೊ ಕೊ ಕೋ ಕೊ

ಊರು ಕೇರಿ ಬೇಡ ಬಾ ಹೋಗೋಣ

ಚಿತ್ರ: ವಾಂಟೆಡ್ (1993)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯನ: ಎಸ್. ಪಿ. ಬಿ & ಕೆ. ಎಸ್. ಚಿತ್ರ

ಊರು ಕೇರಿ ಬೇಡ ಬಾ ಹೋಗೋಣ
ಬನದೊಳಗೋ, ವನದೊಳಗೋ
ಮರೆಯೊಳಗೋ, ಪೊದೆಯೊಳಗೋ
ಊರು ಕೇರಿ ಬೇಡ ಬಾ ಹೋಗೋಣ
ಬನದೊಳಗೋ, ವನದೊಳಗೋ
ಮರೆಯೊಳಗೋ, ಪೊದೆಯೊಳಗೋ
ಊರು ಕೇರಿ ಬೇಡ ಬಾ ಹೋಗೋಣ

ಮಾಗಿ ಮುಚ್ಚಿದ ಮಂಜಿನಲ್ಲಿ
ತೂರಿ ತೂರಾಡಿ ನಡುಗೋಣ
ಮಾಗಿ ಮುಚ್ಚಿದ ಮಂಜಿನಲ್ಲಿ
ತೂರಿ ತೂರಾಡಿ ನಡುಗೋಣ
ಬೂದಿ ಮುಚ್ಚಿದ ಕೆಂಡದ ಬೆಂಕಿಗೆ
ಮೈ ಹಚ್ಚುತಾ ಕಾಯಿಸೋಣ
ಬೂದಿ ಮುಚ್ಚಿದ ಕೆಂಡದ ಬೆಂಕಿಗೆ
ಮೈ ಹಚ್ಚುತಾ ಕಾಯಿಸೋಣ
ಬೆಟ್ಟವೋ, ಗುಡ್ಡವೋ
ತಪ್ಪಲೋ, ಕೊಪ್ಪಲೋ
ಕೋಟೆಯೋ, ಕೊತ್ತಲೋ
ಕತ್ತಲೋ, ಬೆತ್ತಲೋ

ಊರು ಕೇರಿ ಬೇಡ ಬಾ ಹೋಗೋಣ
ಬನದೊಳಗೋ
ವನದೊಳಗೋ
ಮರೆಯೊಳಗೋ
ಪೊದೆಯೊಳಗೋ
ಊರು ಕೇರಿ ಬೇಡ ಬಾ ಹೋಗೋಣ

ಸೂರ್ಯ ಸುಡದ ಜಾವದಲ್ಲಿ
ಹೂವ ಚಲ್ಲಾಡಿ ಮಲಗೋಣ
ಸೂರ್ಯ ಸುಡದ ಜಾವದಲ್ಲಿ
ಹೂವ ಚಲ್ಲಾಡಿ ಮಲಗೋಣ
ಜೇನು ಜಾರುವಾ ಕೊಂಬೆಯ ಕೆಳಗೆ
ಬಾಯಿ ತೆರೆದು ಪ್ರೀತಿಸೋಣ
ಜೇನು ಜಾರುವಾ ಕೊಂಬೆಯ ಕೆಳಗೆ
ಬಾಯಿ ತೆರೆದು ಪ್ರೀತಿಸೋಣ
ನಾರಲ್ಲೋ, ಬೇರಲ್ಲೋ
ಗೆಡ್ಡೆಲ್ಲೋ, ಗೆಣಸಲ್ಲೋ
ಒಪ್ಪತ್ತೋ, ಇಪ್ಪತ್ತೋ
ಆಗತ್ತೋ, ಹೋಗತ್ತೋ

ಊರು ಕೇರಿ ಬೇಡ ಬಾ ಹೋಗೋಣ
ಬನದೊಳಗೋ, ವನದೊಳಗೋ
ಮರೆಯೊಳಗೋ, ಪೊದೆಯೊಳಗೋ
ಊರು ಕೇರಿ ಬೇಡ ಬಾ ಹೋಗೋಣ
ಬನದೊಳಗೋ, ವನದೊಳಗೋ
ಮರೆಯೊಳಗೋ, ಪೊದೆಯೊಳಗೋ
ಊರು ಕೇರಿ ಬೇಡ ಬಾ ಹೋಗೋಣ

ಗುಡು ಗುಡಿ ಬಾ ಹೊಡಿ

ಚಿತ್ರ: ಬೇಡಿ (1987)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯನ: ವಾಣಿಜಯರಾಮ್

ಗುಡು ಗುಡಿ ಬಾ ಹೊಡಿ
ಈ ಹುಡುಗಿಯ ಕೈ ಹಿಡಿ
ಎಡವದೆ ನೀ ನಡಿ
ಬಾ ಸ್ವರ್ಗಕೆ ಮೂರಡಿ
ತೇಲಾಡು ಮತ್ತಲ್ಲಿ ಈಜಾಡಿ
ತೇಲಾಡು ಮತ್ತಲ್ಲಿ ಈಜಾಡಿ
ಗುಡು ಗುಡಿ ಬಾ ಹೊಡಿ
ಈ ಹುಡುಗಿಯ ಕೈ ಹಿಡಿ

ಈ ಬಾಳು ಚಿಕ್ಕದು, ಪುಟ್ಟದು, ಸಣ್ಣದು
ತುಂಬ ಹೂತ್ತೇನು ನಿಲ್ಲದು
ಕಳೆದರೇ ಮತ್ತೆ ದೊರಕದು
ಈ ಲೋಕ ಕೆಟ್ಟದು, ಕೆಟ್ಟರೇ, ನೋಡದು
ನಮ್ಮ ಸುಖಭೋಗ ಒಪ್ಪದು
ಇಂಥ ಸಂತೋಷ ಸಹಿಸದು
ಬೇಡ ವಿಷಾದ..
ಬೇಡ ವಿಷಾದ, ಬೇಕಾ ವಿನೋದ
ಒಂದೊಂದು ದಮ್ಮಲ್ಲೂ ಆನಂದ
ಒಂದೊಂದು ದಮ್ಮಲ್ಲೂ ಆನಂದ

ಈ ಭೂಮಿ ನಿಲ್ಲದು, ನಿಂತರೇ ಉಳಿಯದು
ಯಾಕೆ ಏನೆಂದು ತಿಳಿಯದು
ತಿಳಿದರೇ ಮತ್ತು ಬರುವುದು
ಈ ಗೋಲ ತಿರುಗಿದೆ, ಕಾರಣ ಕುಡಿದಿದೆ
ಏನೂ ಹೇಳೋಕೆ ಆಗದೇ
ತಾನೇ ಮತ್ತಲ್ಲಿ ಮುಳುಗಿದೆ
ಭೂಮಿ ಮತ್ತಲ್ಲಿ...
ಭೂಮಿ ಮತ್ತಲ್ಲಿ, ನಾವೂ ಮತ್ತಲ್ಲಿ
ತೇಲೋಣ ಎಲ್ಲಾರೂ ಮತ್ತಲ್ಲಿ
ತೇಲೋಣ ಎಲ್ಲಾರೂ ಮತ್ತಲ್ಲಿ

ಗುಡು ಗುಡಿ ಬಾ ಹೊಡಿ
ಈ ಹುಡುಗಿಯ ಕೈ ಹಿಡಿ
ಎಡವದೆ ನೀ ನಡಿ
ಬಾ ಸ್ವರ್ಗಕೆ ಮೂರಡಿ..