Wednesday 30 November 2016

ರಾಗಿಹೊಲದಾಗೆ ಖಾಲಿ ಗುಡಿಸಲು

ಚಿತ್ರ: ಅಣ್ಣಯ್ಯ (1993)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯನ: ಎಸ್. ಪಿ. ಬಿ & ಕೆ. ಎಸ್. ಚಿತ್ರ

ಕುಂಕುಮ ಅರ್ಧವಿದೆ..
ಕೈ ಬಳೆ ಕಮ್ಮಿ ಇದೆ..
ಬೈತಲೆ ಕೆಟ್ಟಿದೆ, ಗಲ್ಲವು ಕಟ್ಟಿದೆ, ಎಲ್ಲಿಗೆ ಹೋಗಿದ್ದೆಯೇ..
ಕಾಲ್ಗಳು ಬೀಗುತಿವೆ..
ಕಣ್ಗಳು ತೇಗುತಿವೆ..
ಸೊಂಟವು ಜಗ್ಗದೆ, ಹೆಣ್ಣೆದೆ ಹಿಗ್ಗಿದೆ, ಯಾಕ್ಹಿಂಗೆ ಬಾಗಿದ್ದಿಯೇ..

ರಾಗಿಹೊಲದಾಗೆ ಖಾಲಿ ಗುಡಿಸಲು.. ಓಹೋ
ಗುಡಿಸಲಿಗೆ ಹೋದೆ ಮಾತನಾಡಲು.. ಓಹೋ
ನನ್ನ ಪತಿರಾಯರಿಗೆ ತಿನಿಸಲು.. ಓಹೋ
ಜೇನುತುಪ್ಪ ತಂದೆ ಮಾತು ಬರಿಸಲು.. ಓಹೋ
ತುಂಬಾ ಹೊಸ ಮಾತು ಕಲಿಸಿಕೊಟ್ಟಳಮ್ಮ
ಜೇನುತುಪ್ಪ ಕೊಟ್ಟು, ಕೊಡು ಎಂದಳಮ್ಮ.. ಹೋಯ್

ರಾಗಿಹೊಲದಾಗೆ ಖಾಲಿ ಗುಡಿಸಲು.. ಓಹೋ
ಗುಡಿಸಲಿಗೆ ಹೋದೆ ಮಾತನಾಡಲು.. ಓಹೋ

ತಾಳಿಯು ಬೆನ್ನಲಿದೆ..
ಸತ್ಯವು ಕಾಣುತಿದೆ..
ಕತ್ತಲು ಕಾಯದೇ, ಲೋಕವ ನೋಡದೇ
ಏನೇನು ಕಾಡಿದ್ದಿಯೇ..

ನನ್ನ ಪುಟ್ಟ ಪತಿರಾಯ
ಪುಟ್ಟ ದಿಟ್ಟ ಚನ್ನಿಗರಾಯ.. ಕೇಳಿರಿ
ಹತ್ತಿರಕ್ಕೆ ಬಾ ಎಂದರು
ಬೇಡ ಅಂದ್ರೆ ಬಿಟ್ಟುಕೊಟ್ಟರು.. ತಿಳಿಯಿರಿ

ನೀನು ತಾನೇ ಆಸೆ ತಂದೆ
ನೀನು ಯಾಕೆ ಜೇನು ತಿಂದೆ
ಹೌದು ತಿಂದೆ ಏನು ಮುಂದೆ
ನಾನು ತಾಯಿ ನೀನು ತಂದೆ
ಕೂಸಿಲ್ಲದೇನೆ ತಾಯಾಸೆಯೇನೇ
ಬಾ ಬಿಡಿಸು ಈ ಒಗಟನು
ಒ..ಓ.. ಮುಂದೇನೋ ನಾ ಅರಿಯೆನು

ರಾಗಿಹೊಲದಾಗೆ ಖಾಲಿ ಗುಡಿಸಲು.. ಓಹೋ
ಗುಡಿಸಲಿಗೆ ಹೋದೆ ಮಾತು ಕೇಳಲು.. ಓಹೋ
ತನ್ನ ಪತಿರಾಯನಿಗೆ ತಿನಿಸಲು.. ಓಹೋ
ತಂದ ಜೇನು ತಿಂದೆ ಮಾತು ಕಲಿಯಲು.. ಓಹೋ
ತುಂಬಾ ಹೊಸ ಮಾತು ಕಲಿತುಕೊಂಡರಮ್ಮ
ಜೇನು ತಿಂದು ನೀನು ತಿನ್ನು ಎಂದರಮ್ಮ.. ಹೋ

ರಾಗಿಹೊಲದಾಗೆ ಖಾಲಿ ಗುಡಿಸಲು.. ಓಹೋ
ಗುಡಿಸಲಿಗೆ ಹೋದೆ ಮಾತು ಕೇಳಲು.. ಓಹೋ

ಪಂಚೆಯ ಅಂಚು ಎಲ್ಲಿ..
ಲಂಗದ ಮೂತಿ ಎಲ್ಲಿ..
ಬಟ್ಟೆಗಳೆಲ್ಲಾವು ತಿರುವು ಮುರುವು ಏನೇನು ಸಾಗಿತ್ತಲ್ಲಿ..

ದೂರದಿಂದ ನೋಡಿದರು
ಸಣ್ಣಪದ ಹಾಡಿದರು.. ಕೇಳಿರಿ
ಕಣ್ಣುಗಳ ಹೊಗಳಿದರು
ತಾಳಿಅಂದ್ರೆ ನಿಲ್ಲಿಸಿದರು.. ತಿಳಿಯಿರಿ

ನೀನು ತಾನೇ ಹಾಡು ಎಂದೆ
ಯಾಕೆ ನನ್ನ ಪ್ರಾಣ ಎಂದೆ
ಪ್ರೀತಿಯಿಂದ ಹಾಗೆ ಅಂದೆ
ನಾವು ಇನ್ನು ಪ್ರೀತಿ ಹಿಂದೆ
ಈ ಪ್ರೇಮಪಾಠ ಈ ಜೇನಿನೋಟ
ಈ ತಲೆಗೆ ಈಗೇರಿತು
ಅ..ಆ.. ಓ ಚಲುವೆ ಏನಾಯಿತು

ರಾಗಿಹೊಲದಾಗೆ ಖಾಲಿ ಗುಡಿಸಲು.. ಓಹೋ
ಗುಡಿಸಲಿಗೆ ಹೋದೆ ಮಾತನಾಡಲು.. ಓಹೋ
ತನ್ನ ಪತಿರಾಯನಿಗೆ ತಿನಿಸಲು.. ಓಹೋ
ತಂದ ಜೇನು ತಿಂದೆ ಮಾತು ಕಲಿಯಲು.. ಓಹೋ
ತುಂಬಾ ಹೊಸ ಮಾತು ಕಲಿತುಕೊಂಡರಮ್ಮ
ಜೇನು ತಿಂದು ನೀನು ತಿನ್ನು ಎಂದರಮ್ಮ.. ಹೋ

ರಾಗಿಹೊಲದಾಗೆ ಖಾಲಿ ಗುಡಿಸಲು.. ಓಹೋ
ಗುಡಿಸಲಿಗೆ ಹೋದೆ ಮಾತು ಕೇಳಲು.. ಓಹೋ

No comments:

Post a Comment