Wednesday 30 November 2016

ಹೆಣ್ಣು ಹೊನ್ನು ಮಣ್ಣು ಎಂಬ ಮಾಯೆಯುಂಟು ಊರತುಂಬ

*ನೀಲಿಮಲೆಯ* *ಜೀವದೊಡಯ*
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಡಾII ರಾಜ್ ಕುಮಾರ್

ಧೀಮ್ತಗತ್ತೊಂ ಧೀಮ್ತಗತ್ತೊಂ ಧೀಮ್ತಗತ್ತೊಂ
ಧೀಮ್ತಗತ್ತೊಂ ಧೀಮ್ತಗತ್ತೊಂ ಧೀಮ್ತಗತ್ತೊಂ ಸ್ವಾಮಿ ಅಯ್ಯಪ್ಪ
ಶರಣಂ ಸ್ವಾಮಿ ಅಯ್ಯಪ್ಪ ಶರಣಂ ಸ್ವಾಮಿ ಅಯ್ಯಪ್ಪ

ಹೆಣ್ಣು ಹೊನ್ನು ಮಣ್ಣು ಎಂಬ ಮಾಯೆಯುಂಟು ಊರತುಂಬ
ಎಂಬ ಗುಟ್ಟು ಹೇಳಿ ಹೊರಟ ಸ್ವಾಮಿ ಅಯ್ಯಪ್ಪ
ಸ್ವಾಮಿ ಅಯ್ಯಪ್ಪ ಶರಣಂ ಸ್ವಾಮಿ ಅಯ್ಯಪ್ಪ
ತಾಯಿಗಾಗಿ ರಾಜ್ಯಬಿಟ್ಟ ಬಾಲಯೋಗಿಯೋ
ಕಾಮ ಕ್ರೋಧ ಲೋಭ ಕಳೆವ ಜ್ಞಾನಜ್ಯೋತಿಯೋ
ಮಾಯಾದೂರ ಅಯ್ಯಪ್ಪ ಮಾಯಾಮೋಹ ಬಿಡಿಸಪ್ಪ
ಹೆಣ್ಣು ಹೊನ್ನು ಮಣ್ಣು ಎಂಬ ಮಾಯೆಯುಂಟು ಊರತುಂಬ
ಎಂಬ ಗುಟ್ಟು ಹೇಳಿ ಹೊರಟ ಸ್ವಾಮಿ ಅಯ್ಯಪ್ಪ
ಸ್ವಾಮಿ ಅಯ್ಯಪ್ಪ ಶರಣಂ ಸ್ವಾಮಿ ಅಯ್ಯಪ್ಪ

ಕಾಡಿನಾಳದಲ್ಲಿ ಘಾಢಾoಧಕಾರದಲ್ಲಿ
ಸ್ವಾಮಿ ಪ್ರೇಮ ಕೋರಿ ಶಬರಿ ದಾರಿಕಾದಳಿಲ್ಲಿ ...
ತನ್ನಿ ಸ್ವಾಮಿ ಗಣವು ಗಿರಿ ಏರದಂತ ದಿನವು
ನೀಲಮಲೆಯಲಿ ನಮ್ಮ ಮದುವೆ ಅಂದ ಜಾಣ ಪ್ರಭುವು
ನಾವು ಗಿರಿಯ ಏರದಿರುವ ಕಾಲ ಬರದಯ್ಯ
ಘೋರ ಭ್ರಹ್ಮಚಾರಿ ನಿನ್ನ ಲೀಲೆ ಇದುವಯ್ಯ
ಮಾಯಾದೂರ ಅಯ್ಯಪ್ಪ ಮಾಯಾಮೋಹ ಬಿಡಿಸಪ್ಪ

ಧೀಮ್ತಗತ್ತೊಂ ಧೀಮ್ತಗತ್ತೊಂ ಧೀಮ್ತಗತ್ತೊಂ
ಧೀಮ್ತಗತ್ತೊಂ ಧೀಮ್ತಗತ್ತೊಂ ಧೀಮ್ತಗತ್ತೊಂ ಸ್ವಾಮಿ ಅಯ್ಯಪ್ಪ
ಶರಣಂ ಸ್ವಾಮಿ ಅಯ್ಯಪ್ಪ ಶರಣಂ ಸ್ವಾಮಿ ಅಯ್ಯಪ್ಪ
ಹೆಣ್ಣು ಹೊನ್ನು ಮಣ್ಣು ಎಂಬ ಮಾಯೆಯುಂಟು ಊರತುಂಬ
ಎಂಬ ಗುಟ್ಟು ಹೇಳಿ ಹೊರಟ ಸ್ವಾಮಿ ಅಯ್ಯಪ್ಪ
ಸ್ವಾಮಿ ಅಯ್ಯಪ್ಪ ಶರಣಂ ಸ್ವಾಮಿ ಅಯ್ಯಪ್ಪ

ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ...
ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ...

ತಾಯನೋವಿಗಾಗಿ ಹುಲಿಹಾಲ ಬೇಟೆಗಾಗಿ
ಬೇಡಎಂದ ತಂದೆಯ ಮೀರಿ ಕಾಡಿಗೋಡಿಬಂದ...
ದೇವಲೋಕ ಗೆದ್ದ ಆ ಖ್ರೂರ ಮಹಿಷಿಯ ಕೊಂದ
ಮುರಿದ ಕೋಡಿನಿಂದ ಅಣದ ನದಿಗೆ ಜನ್ಮತಂದ
ತಾಯಿಗಾಗಿ ರಾಜ್ಯಬಿಟ್ಟ ಬಾಲಯೋಗಿಯೋ
ಕಾಮ ಕ್ರೋಧ ಲೋಭ ಕಳೆವ ಜ್ಞಾನಜ್ಯೋತಿಯೋ
ಮಾಯಾದೂರ ಅಯ್ಯಪ್ಪ ಮಾಯಾಮೋಹ ಬಿಡಿಸಪ್ಪ

ಧೀಮ್ತಗತ್ತೊಂ ಧೀಮ್ತಗತ್ತೊಂ ಧೀಮ್ತಗತ್ತೊಂ
ಧೀಮ್ತಗತ್ತೊಂ ಧೀಮ್ತಗತ್ತೊಂ ಧೀಮ್ತಗತ್ತೊಂ ಸ್ವಾಮಿ ಅಯ್ಯಪ್ಪ
ಶರಣಂ ಸ್ವಾಮಿ ಅಯ್ಯಪ್ಪ ಶರಣಂ ಸ್ವಾಮಿ ಅಯ್ಯಪ್ಪ
ಹೆಣ್ಣು ಹೊನ್ನು ಮಣ್ಣು ಎಂಬ ಮಾಯೆಯುಂಟು ಊರತುಂಬ
ಎಂಬ ಗುಟ್ಟು ಹೇಳಿ ಹೊರಟ ಸ್ವಾಮಿ ಅಯ್ಯಪ್ಪ
ಸ್ವಾಮಿ ಅಯ್ಯಪ್ಪ ಶರಣಂ ಸ್ವಾಮಿ ಅಯ್ಯಪ್ಪ
ಸ್ವಾಮಿ ಅಯ್ಯಪ್ಪ ಶರಣಂ ಸ್ವಾಮಿ ಅಯ್ಯಪ್ಪ

No comments:

Post a Comment