Wednesday 30 November 2016

ಬಾಗೂರಪ್ಪನ ಮಗನೂರಳ್ಳಿಯ

ಕಿರಾತಕ (1988)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯನ: ಎಸ್. ಪಿ. ಬಿ

ಬಾಗೂರಪ್ಪನ ಮಗನೂರಳ್ಳಿಯ ತಳವಾರಯ್ಯನ
ಮಗನ ಅಕ್ಕನಯ್ಯನವ್ವ ತಾತ ನಿಲ್ಲದವನ
ಮಾವನ ಭಾವಮೈದ.. ಈ ಹಳ್ಳಿ ಹೈದ

ಕೆಟ್ಟು ಪಟ್ಟಣ ಸೇರಬೇಡ.. ಸೇರಿದರೂ
ಕೆಟ್ಟ ದಳ್ಳಾಳಿಗಳ ಕೂಡಬೇಡ.. ಕೂಡಿದರೂ
ಕೆಟ್ಟ ಬ್ರಾಂಧಿ ವಿಸ್ಕಿ ಇಗ್ಗಬೇಡ.. ಇಗ್ಗಿದರೂ
ಕೆಟ್ಟ ಜೂಜು ಗೀಜು ಆಡಬೇಡ.. ಆಡಿದರೂ..ಆಡಿದರೂ..ಆಡಿದರೂ..
ಬಿಳಿಯ ಸೊಂಟದ ಮೈಯ್ಯ..
ಹಾಯ್..ಹಾಯ್..ಹಾಯ್..ಹಾಯ್
ಬಳೆಯ ತುಂಬಿದ ಕೈಯ ಹಿಡಿಯ ಬಾರದು
ಹಿಡಿದರೇ ಗೋವಿಂದನ ಮರೆಯಬಾರದು
ಗೋವಿಂದ.. ಗೋವಿಂದ

420 ಮಾಯಾಪುರದಲ್ಲಿ
220 ಜರದಾ ಬಾಯಲ್ಲಿ
420 ಮಾಯಾಪುರದಲ್ಲಿ
220 ಜರದಾ ಬಾಯಲ್ಲಿ
ಬ್ರಾಂಧಿ ಸಾರಾಯಿ ಗೂಂಗಿನಲ್ಲಿ
ಬಾಡಿಯ ಲೇಡಿ ಸಂಗದಲ್ಲಿ
ತಂದಿದ್ದ ಕಾಸು ಎಲ್ಲಾನು ಲಾಸು
ಇರೋದಿಷ್ಟೇ ಹಾಸು..
ಬಾರೆ ನನ್ನ ಜುಮಕಿ ಜುಮಕಿ ಜಮುನಾ
ನಾಚ್ ಮೇರೆ ನೂರುಜ್ಹಾನ್ ಯಮುನಾ
ವಾಡಿ ಎನ್ನ ತಂಜಾವೂರು ಪೊಣ್ಣೆ
ರಾವೆ ನಾ ಚಲಿಯ ಚಿನ್ನದಾನ

420 ಮಾಯಾಪುರದಲ್ಲಿ
220 ಜರದಾ ಬಾಯಲ್ಲಿ
ಬ್ರಾಂಧಿ ಸಾರಾಯಿ ಗೂಂಗಿನಲ್ಲಿ
ಬಾಡಿಯ ಲೇಡಿ ಸಂಗದಲ್ಲಿ

ರಂಗಿನ ಪಟ್ಟಣ ಬೆಂಕಿ ಪೊಟ್ಟಣವೂ
ಒಳ್ಳೆಯತನಕೆ ಯಾರಿಗೂ ಬಗ್ಗದು
ಹಳ್ಳಿಯ ಜನಕೆ ಈ ಊರು ಒಗ್ಗದು
ನಮ್ಮೂರು ಚಿಕ್ಕದು ನಿಮ್ಮೂರು ದೊಡ್ಡದವ್ವ
ಊರಿನ ಜೊತೆಗೆ ಸಂತೆಯು ದೊಡ್ಡದಿಲ್ಲಿ
ಎಮ್ಮೆಯ ಕಟ್ಟುವ ಗೂಟವು ದೊಡ್ಡದು
ಗದ್ದೆ ಹೂಳುವ ಕೈಯಿ.. ಅಯ್ಯೋ
ಮುಟ್ಟಿ ಒದ್ದೆಯಾಯ್ತು ಮೈಯಿ
ನಿನ್ನ ಕೈಯಿ ಚಿಕ್ಕದು
ಮುಟ್ಟಿದರೇ ಕೈಯಿ ರೇಟು ಕೂಡ ದೊಡ್ಡದು
ಗೋವಿಂದ.. ಗೋವಿಂದ

420 ಮಾಯಾಪುರದಲ್ಲಿ
220 ಜರದಾ ಬಾಯಲ್ಲಿ
ಬ್ರಾಂಧಿ ಸಾರಾಯಿ ಗೂಂಗಿನಲ್ಲಿ
ಬಾಡಿಯ ಲೇಡಿ ಸಂಗದಲ್ಲಿ

ಕಲಿಯುಗಕಿನ್ನು ಬಂತು ಕೊನೆಗಾಲ
ಕಲ್ಲಿನ ಕೋಳಿ ಕೂಗುವ ಕಾಲ
ಕಲ್ಲಿನ ಬಸವ ಮೇಯುವ ಕಾಲ
ನಮ್ಮನು ನಾವೇ ತಿನ್ನುವ ಶನಿಗಾಲ
ಇನ್ನೇನು ಬಂತು ಕಾಯಿರಿ ಎಲ್ಲಾ
ಸಾಯುವ ಮುಂಚೆ ಮೆರೆಯಿರಿ ಎಲ್ಲಾ
ಶಿವನು ದಡ್ಡನಲ್ಲ.. ಶಿವ ಶಿವ
ನಮ್ಮ ಕಥೆಯನೆಲ್ಲಾ ಬಲ್ಲ
ನಮ್ಮ ಪಾಪದ ಬುಟ್ಟಿ ದೊಡ್ಡದು
ಚಿತ್ರಗುಪ್ತನ ಶಿಕ್ಷೆಯ ಲೀಷ್ಟು ಕೂಡ ದೊಡ್ಡದು
ಗೋವಿಂದ.. ಗೋವಿಂದ

ಅರೆ..ಅರೆ..ಅಹಾ..
420 ಮಾಯಾಪುರದಲ್ಲಿ
220 ಜರದಾ ಬಾಯಲ್ಲಿ
ಬ್ರಾಂಧಿ ಸಾರಾಯಿ ಗೂಂಗಿನಲ್ಲಿ
ಬಾಡಿಯ ಲೇಡಿ ಸಂಗದಲ್ಲಿ
ತಂದಿದ್ದ ಕಾಸು ಎಲ್ಲಾನು ಲಾಸು
ಇರೋದಿಷ್ಟೇ ಹಾಸು..
ಬಾರೆ ನನ್ನ ಜುಮಕಿ ಜುಮಕಿ ಜಮುನಾ
ನಾಚ್ ಮೇರೆ ನೂರುಜ್ಹಾನ್ ಯಮುನಾ
ವಾಡಿ ಎನ್ನ ತಂಜಾವೂರು ಪೊಣ್ಣೆ
ರಾವೆ ನಾ ಚಲಿಯ ಚಿನ್ನದಾನ..

No comments:

Post a Comment